ಧಾರ್ಮಿಕ
ವಕ್ವಾಡಿ: 35 ವರ್ಷಗಳಿಂದ ಬಾವಿಯೊಳಗಿದ್ದ ನಾಗನ ಕಲ್ಲನ್ನು ಮೇಲಕ್ಕೆ ತೆಗೆದುಕೊಟ್ಟ ಈಶ್ವರ ಮಲ್ಪೆ

Views: 131
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಸಪರಿವಾರ ಶ್ರೀ ಹಳೆಯಮ್ಮ ದೈವಸ್ಥಾನ ಇದರ ಅಷ್ಠ ಬಂಧ ಬ್ರಹ್ಮಕಲಶೋತ್ಸವ ಮತ್ತು ಹಳೆಯಮ್ಮ ದೇವಿಯ ಪುನರ್ ಪ್ರತಿಷ್ಠೆ, ನಾಗದೇವರ ಪ್ರತಿಷ್ಠೆಯು ಜೂನ್ 8 ರಿಂದ 10ರವರೆಗೆ ನಡೆಯಲಿದ್ದು,
ಆ ಪ್ರಯುಕ್ತ ಜೂನ್ 9ರಂದು ನಡೆಯಲಿರುವ ನಾಗದೇವರ ಪ್ರತಿಷ್ಠೆಗಾಗಿ ಸುಮಾರು 35 ವರ್ಷಗಳ ಹಿಂದೆ ಸ್ಥಳೀಯರೊಬ್ಬರು ದೇವಸ್ಥಾನದ ಪರ್ಯಾಯ ಅರ್ಚಕ ಗಿರೀಶ್ ಐತಾಳ್ ಅವರ ಮನೆಯ ಬಾವಿಯೊಳಗೆ ನಾಗನ ಕಲ್ಲನ್ನು ಹಾಕಿರುತ್ತಾರೆ. ಅದರ ಪ್ರತಿಷ್ಠೆಗಾಗಿ ಶನಿವಾರ ಸಂಜೆ ನಾಗನ ಕಲ್ಲನ್ನು ಹೊರತೆಗೆಯಲು ಈಶ್ವರ್ ಮಲ್ಪೆ ಅವರನ್ನು ಕರೆಸಿ ಆಳವಾದ ಬಾವಿಗೆ ಇಳಿದು ನಾಗನಕಲ್ಲನ್ನು ಹುಡುಕಿ ಮೇಲಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ಈಶ್ವರ್ ಮಲ್ಪೆ ಮತ್ತು ತಂಡದವರನ್ನು ಊರವರ ಪರವಾಗಿ ಕೃತಜ್ಞತೆ ಸಲ್ಲಿಸಿ, ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಜೂನ್ 9ರಂದು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಾಗದೇವರ ಪ್ರತಿಷ್ಠೆ ನಡೆಯಲಿದೆ.