ಧಾರ್ಮಿಕ

ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ವಕ್ವಾಡಿ ಮೇಲ್ಮನೆ ಸತ್ಯರಂಜನ್ ಹೆಗ್ಡೆ ಆಯ್ಕೆ 

Views: 35

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ವಕ್ವಾಡಿ ಮೇಲ್ಮನೆ ಸತ್ಯರಂಜನ್ ಹೆಗ್ಡೆಯವರು ಆಯ್ಕೆಯಾಗಿದ್ದಾರೆ.

ಸತ್ಯರಂಜನ್ ಹೆಗ್ಡೆ ಅವರು ಬಿಕಾಂ, ಎಂಕಾಂ ಪದವೀಧರಾಗಿದ್ದು, ಈ ಹಿಂದೆ ಕಾಳಾವರ ಗ್ರಾಮ ಪಂಚಾಯತ್ ಸದಸ್ಯರಾಗಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ವಕ್ವಾಡಿ ಚಿತ್ತೇರಿ ನಾಗಬ್ರಹ್ಮ ರಕ್ತೇಶ್ವರಿ ದೇವಸ್ಥಾನ ಹಾಗೂ ಗೋಳಿಹಾಡಿ ನಂದಿಕೇಶ್ವರ ದೈವಸ್ಥಾನದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿಯಾಗಿ ಪ್ರಶಾಂತ ಶೆಟ್ಟಿ ಸಣಗಲ್ಲುಮನೆ, ಅರ್ಚಕರಾಗಿ ಕೃಷ್ಣ ಐತಾಳ್, ದೇವೇಂದ್ರ ಆಚಾರ್ಯ, ಪ್ರದೀಪ್ ಪೂಜಾರಿ, ರಾಜೀವ ದೇವಾಡಿಗ, ದಿನೇಶ್ ಕುಮಾರ್, ಶ್ರೀಮತಿ ಜಯಂತಿ, ಶ್ರೀಮತಿ ಮಮತಾ ಆಯ್ಕೆಯಾಗಿದ್ದಾರೆ.

Related Articles

Back to top button
error: Content is protected !!