ಸಾಂಸ್ಕೃತಿಕ

ಕುಂದಾಪುರ: ಹಿರಿಯ ಯಕ್ಷಗಾನ  ಪ್ರಸಂಗಕರ್ತ ಕಂದಾವರ ರಘರಾಮ ಶೆಟ್ಟಿಯವರಿಗೆ ಕೆಂಪೇಗೌಡ ಪ್ರಶಸ್ತಿ  

Views: 62

ಕನ್ನಡ ಕರಾವಳಿ ಸುದ್ದಿ: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಕೊಡ ಮಾಡುವ ಕೆಂಪೆಗೌಡ ಪ್ರಶಸ್ತಿಯನ್ನು ಪರಮ ಪೂಜ್ಯ ಡಾ. ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ  ಕರ್ನಾಟಕ ಸರಕಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ  ಶಾಸಕರಾದ ಶ್ರೀ ಡಾ ಸಿ ಎನ್ ಅಶ್ವತ್ ನಾರಾಯಣ್ ರವರ ನೇತೃತ್ವದಲ್ಲಿ ಹಾಗೂ ಸಮಸ್ತ ಗಣ್ಯರ ಸಮ್ಮುಖದಲ್ಲಿ ನೆಡಯಲಿರುವ ನಾಡ ಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವದ ಆಂಗವಾಗಿ ಯಕ್ಷಗಾನ ಕ್ಷೇತ್ರದ ಹಿರಿಯ  ಯಕ್ಷಗಾನ ಪ್ರಸಂಗಕರ್ತರು ನಿವೃತ್ತ ಶಿಕ್ಷಕರೂ ಯಕ್ಷ ಸಾಹಿತಿ ಅರ್ಥದಾರಿಗಳು, ಯಕ್ಷಗಾನ ಕ್ಷೇತ್ರದ ದಿಗ್ಗಜರೂ ಆದ ಕಂದಾವರ ರಘರಾಮ ಶೆಟ್ಟಿಯವರಿಗೆ ಜೂನ್ 27 ರಂದು ಅರಮನೆ ಮೈದಾನದಲ್ಲಿ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂದಾವರ ರಘುರಾಮ ಶೆಟ್ಟರ ರಚನೆಗಳಲ್ಲಿ ರಂಗದೃಷ್ಠಿ ಸ್ಪುಟವಾಗಿದ್ದು ಇಡಿಯ ಪ್ರದರ್ಶನದ ಚೌಕಟ್ಟು, ಹಾಡುವಿಕೆ, ರಸವೈವಿಧ್ಯ, ವೇಷಗಳ ಅವಕಾಶ, ಒಟ್ಟು ಸಮತೋಲ, ನಾಟಕೀಯ ನಡೆ ಇವುಗಳನ್ನು ಗಮನಿಸಿ ಅವರು ರಚನೆಗಳನ್ನು ನೀಡಿದ್ದಾರೆ. ಪಾತ್ರ ಚಿತ್ರಣ, ಸನ್ನಿವೇಶ ಚಿತ್ರಣಗಳಿಗೆ ಗಮನವಿತ್ತಿದ್ದಾರೆ.ಚೆಲುವೆ ಚಿತ್ರಾವತಿ, ಶೂದ್ರತಪಸ್ವಿನಿ, ವಸುವರಾಂಗಿ, ಸೀತಾಪಾರಮ್ಯಗಳು ವಿಶಿಷ್ಟವಾದ ರಚನೆಗಳೆನ್ನಬಹುದು. ಆಧುನಿಕ ರಂಗದ ಅವಶ್ಯಕತೆಯಿಂದ ಪ್ರಸಂಗಕರ್ತನು ಹೇಗೆ ಒದ್ದಾಟಕ್ಕೊಳಗಾಗುತ್ತಾನೆ ಎಂಬುದಕ್ಕೂ ಇಲ್ಲಿಯ ರಚನೆಗಳಲ್ಲಿ ಪುರಾವೆಗಳಿವೆ. ಶೂದ್ರತಪಸ್ವಿನಿಯಲ್ಲಿ ರೂಪಕವೊಂದರಲ್ಲೂ, ಅಂಜನ ದೃಶ್ಯದಲ್ಲೂ ಸಾಂಪ್ರದಾಯಿಕ ಯಕ್ಷಗಾನದ ವಸ್ತು, ವೇಷಗಳನ್ನು ತಂದಿರುವ ರೀತಿ, ಹಾಗಾದರೂ ಅದನ್ನುಳಿಸುವ ಯೋಚನೆಗಳು, ರಂಗಭೂಮಿಯು ಓರ್ವ ಕವಿಯ ಮೂಲಕ ಕಂಡುಕೊಳ್ಳುವ ಹೊಸ, ಹೊಸ ದಾರಿಗಳಿಗೆ ಸಾಕ್ಷಿಯಾಗಿವೆ. ಇದೇ ರೀತಿ ಪಾತ್ರ ಕಲ್ಪನೆ, ಕಥಾಪರಿವರ್ತನೆಗಳಲ್ಲಿ ಪ್ರಸಂಗಕರ್ತರ ಪ್ರತಿಭೆ, ದೃಷ್ಟಿ ವೈಶಾಲ್ಯಗಳೂ ವ್ಯಕ್ತವಾಗಿವೆ.

 

Related Articles

Back to top button