ಇತರೆ

ಹಂಗಾರಕಟ್ಟೆ ಸೀತಾನದಿ ಹೊಳೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Views: 70

ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೊಬ್ಬರು ಹಂಗಾರಕಟ್ಟೆ ಸೀತಾನದಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪ್ರಾನ್ಸಿಸ್ ಫೆರ್ನಾಂಡೀಸ್ ಎಂದು ತಿಳಿಯಲಾಗಿದೆ.

ಐರೋಡಿ ಗ್ರಾಮ, ಬ್ರಹ್ಮಾವರ ಇವರ ಹೆಂಡತಿ ಮೊಂತಿ ಲೋಬೋ ರವರ ತಮ್ಮ ಪ್ರಾನ್ಸಿಸ್‌ ಫೆರ್ನಾಂಡಿಸ್‌ (38) ರವರು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, 3 ದಿನಗಳ ಹಿಂದೆ ಮನೆಗೆ ಬಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು. ದಿನಾಂಕ 14/03/2026 ರ ರಾತ್ರಿ 9:00 ಗಂಟೆಗೆ ಊಟ ಮಾಡಿ ಹೊರಗಡೆ ಮಲಗಿದ್ದವರು ರಾತ್ರಿ ಮನೆಯ ಒಳಗಡೆ ಆಚೆ ಇಚೆ ತಿರುಗುತ್ತ ಇದ್ದು ದಿನಾಂಕ 15/03/2026 ರಂದು ರಾತ್ರಿ 01:00 ಗಂಟೆಯ ಸಮಯ ನೋಡುವಾಗ ಮನೆಯಲ್ಲಿ ಎಲ್ಲೂ ಕಾಣ ಸಿಗದೇ ಇದ್ದು ಬೆಳಿಗ್ಗೆ ಸಂಬಂದಿಕರ ಮನೆ ,ಉಡುಪಿ ಮಲ್ಪೆ ಎಲ್ಲ ಕಡೆ ವಿಚಾರಿಸಿದಾಗಲೂ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18/03/2026 ರಂದು ಸಂಜೆ 5:00 ಗಂಟೆಗೆ ಪಕ್ಕದ ಮನೆಯ ಫ್ಲೋರೀನ್‌ ಎಂಬುವವರು ಮನೆಯ ಹಿಂದುಗಡೆ ಹಂಗಾರಕಟ್ಟೆ ಸೀತಾನದಿ ಹೊಳೆಯಲ್ಲಿ ಒಂದು ಬಾಡಿ ಇದ್ದು ಅದು ವಾಸನೆ ಬರುತ್ತಿದೆ ಎಂದು ತಿಳಿಸಿರುತ್ತಾರೆ ಕೂಡಲೇ ಅಲ್ಲಿಗೆ ಹೋಗಿ ನೋಡಿದ್ದು ಅದು ಪ್ರಾನ್ಸಿಸ್‌ ಫೆರ್ನಾಂಡಿಸ್‌ ಪ್ರಾಯ 38 ವರ್ಷ ರವರ ಮೃತ ಶರೀರವಾಗಿರುತ್ತದೆ. ಪ್ರಾನ್ಸಿಸ್‌ ಫೆರ್ನಾಂಡಿಸ್‌ ರವರು ದಿನಾಂಕ 14/03/2026 ರ ರಾತ್ರಿ 9:00 ಗಂಟೆಯಿಂದ ದಿನಾಂಕ 18/03/2026 ರ ಸಂಜೆ 5:00 ಗಂಟೆಯ ನಡುವೆ ಹಂಗಾರಕಟ್ಟೆ ಸೀತಾನದಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

 

 

 

Related Articles

Back to top button
error: Content is protected !!