ಮಣಿಪಾಲದಲ್ಲಿ ಅಕ್ರಮ ಹುಕ್ಕಾ ಸೇವನೆ: 8 ಮಂದಿ ಯುವಕರ ವಿರುದ್ಧ ಪ್ರಕರಣ..ಏನಿದು ಹುಕ್ಕಾ?
Views: 28
ಕನ್ನಡ ಕರಾವಳಿ ಸುದ್ದಿ: ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಕೆಫೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ, ನಿಷೇಧಿತ ಹುಕ್ಕಾ ಸೇವನೆ ಮಾಡುತ್ತಿದ್ದ 8 ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾರತ್ನ ನಗರದ ಡಿಸಿ ಆಫೀಸ್ ರಸ್ತೆಯಲ್ಲಿರುವ ಕಟ್ಟಡದ ಮೊದಲ ಮಹಡಿಯಲ್ಲಿರುವ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಗಸ್ಟ್ 6 ರಂದು ಸಹಾಯಕ ಸಬ್-ಇನ್ಸ್ಪೆಕ್ಟರ್ ವಾಮನ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದರು. ಹೆಡ್ ಕಾನ್ಸ್ಟೆಬಲ್ಗಳಾದ ಸುರೇಶ್ ಶೆಟ್ಟಿ ಮತ್ತು ಚೇತನ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್ಟೆಬಲ್ಗಳಾದ ರವಿರಾಜ್ ಮತ್ತು ಉಮೇಶ್ ಅವರ ಸಹಾಯದಿಂದ ಕಾರ್ಯಾಚರಣೆ ನಡೆಸಿದರು.
ತಪಾಸಣೆಯ ಸಮಯದಲ್ಲಿ, ಕೆಫೆಯೊಳಗೆ ಕುಳಿತಿದ್ದ ಎಂಟು ಯುವಕರು ಹುಕ್ಕಾ ಧೂಮಪಾನ ಮಾಡುತ್ತಿರುವುದು ಪತ್ತೆಯಾಗಿದೆ . ಅವರನ್ನು ಕುಂದಾಪುರದ ಎಸ್. ರಿಯಾಜ್, ಬೈಂದೂರಿನ ಜೀಶನ್ ಅಬ್ದುಲ್ ಜಾಹಿರ್, ಗಂಗೊಳ್ಳಿಯ ಮೊಹಮ್ಮದ್ ಸಮೀರ್, ಉಡುಪಿಯ ಮೊಹಮ್ಮದ್ ಸವಾದ್, ಉಡುಪಿಯ ಕೃಷ್ಣ, ಉಡುಪಿಯ ಚಿರಾಗ್, ಕಾಪುವಿನ ತಾರಾನಾಥ್ ಮತ್ತು ಉಡುಪಿಯ ಅನ್ವೀತ್ ಎಂದು ಗುರುತಿಸಲಾಗಿದೆ. ದಾಳಿಯ ವೇಳೆ ಮೂರು ಹುಕ್ಕಾ ಸೆಟ್ಗಳು, ತಂಬಾಕು ಮಿಶ್ರಿತ ಹುಕ್ಕಾ ಫ್ಲೇವರ್ ಪ್ಯಾಕ್ಗಳು ಸೇರಿದಂತೆ ಸುಮಾರು 4 ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣ್ಣೂರು ಗ್ರಾಮದ ತೋಟ ಹೌಸ್ ನಿವಾಸಿ, ಕೆಫೆಯ ವ್ಯವಸ್ಥಾಪಕ-ಕಮ್-ಕ್ಯಾಷಿಯರ್ ಮೊಹಮ್ಮದ್ ಶಫಾನ್ (22) ಅವರನ್ನು ಗ್ರಾಹಕರಿಗೆ ಹುಕ್ಕಾ ಪೂರೈಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸರು ಕೆಫೆ ವ್ಯವಸ್ಥಾಪಕ ಮತ್ತು ಎಂಟು ವ್ಯಕ್ತಿಗಳ ವಿರುದ್ಧ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಏನಿದು ಹುಕ್ಕಾ?

ಹುಕ್ಕಾ (ಗುಡಗುಡಿ) ಎಂದರೆ ತಂಬಾಕು ಅಥವಾ ಸುವಾಸನೆಯುಕ್ತ ಪದಾರ್ಥಗಳನ್ನು ಬೂದಿ ಹಾಗೂ ಇದ್ದಿಲಿನಿಂದ ಕಾಯಿಸಿ, ಬರುವ ಹೊಗೆಯನ್ನು ನೀರಿನ ಪಾತ್ರೆಯ ಮೂಲಕ ಸೋಸಿ ಸೇವಿಸುವ ಒಂದು ಸಾಧನವಾಗಿದೆ. ಇದನ್ನು ಗುಡಗುಡಿ ಅಥವಾ ಜಳಕ ಎಂದೂ ಕರೆಯುತ್ತಾರೆ. ಸೇದುವಾಗ ಬರುವ ಶಬ್ದದಿಂದ ಈ ಹೆಸರು ಬಂದಿದೆ.ಮೇಲ್ಬಾಗದಲ್ಲಿ ತಂಬಾಕು ಹಾಗೂ ಇದ್ದಿಲಿಡಲಾಗುತ್ತದೆ. ಕೆಳಗೆ ಇರುವ ನೀರಿನ ಮೂಲಕ ಹೊಗೆ ಹಾದು ಬರುತ್ತದೆ. ಒಂದು ಬಾರಿ ಹುಕ್ಕಾ ಸೇದುವುದು ನೂರಾರು ಸಿಗರೇಟ್ಗಳನ್ನು ಸೇದಿದಷ್ಟೇ ಹಾನಿಕಾರಕ ಎಂದು ವೈದ್ಯಕೀಯ ತಜ್ಞರು ಹಾಗೂ ವರದಿಗಳು ತಿಳಿಸುತ್ತವೆ.






