ಬಳ್ಳಾರಿ: ಹೆರಿಗೆಗೆ ದಾಖಲಾದ ಮೂವರು ಬಾಣಂತಿಯರು ಒಂದು ವಾರದ ಅಂತರದಲ್ಲೇ ಸಾವು!.. ಸಮಗ್ರ ತನಿಖೆ

Views: 49
ಬಳ್ಳಾರಿ : ನಗರದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ ಮೂವರು ಬಾಣಂತಿಯರು ಮೃತಪಟ್ಟ ವರದಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವು ಮೂವರು ವೈದ್ಯರ ತನಿಖಾ ತಂಡ ರಚಿಸಿ ಆದೇಶಿಸಿದೆ.
ಹೆರಿಗೆಗೆ ದಾಖಲಾಗಿ, ಸಿಸೇರಿಯನ್ಗೆ ಒಳಗಾದ ಬಳಿಕ ಏಕಾಏಕಿ ತೀವ್ರ ಅಸ್ವಸ್ಥಗೊಂಡಿದ್ದ ರೋಜಾ (19) ಎಂಬುವವರು ಗುರುವಾರ ಕೊನೆಯುಸಿರೆಳೆದಿದ್ದಾರೆ. ಇದಕ್ಕೂ ಹಿಂದಿನ ದಿನ ನಂದಿನಿ ಮತ್ತು ಲಲಿತಮ್ಮ ಎಂಬವರು ಮೃತರಾಗಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ
ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಭಾಸ್ಕರ್ ಬಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷ ಟಿ. ಆರ್ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ.
ಇವರು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಹೆರಿಗೆ ವೇಳೆ ಸಾವಿಗೆ ಕಾರಣವೇನು? ಎಂಬುದರ ಬಗ್ಗೆ ತನಿಖಾ ವರದಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯದ ಕುಲ ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ರಿಪೋರ್ಟ್ ಬರಬೇಕಿದೆ. 70 ಆಪರೇಷನ್ಗಳನ್ನು ಮಾಡಿದ್ದೇವೆ. ಬೇರೆಯವರೆಲ್ಲ ಚೆನ್ನಾಗಿದ್ದಾರೆ. ಇದರಿಂದಲೇ ಹೀಗೆ ಆಗಿದೆ ಅಂತ ನಾವು ಹೇಳಲಾಗುವುದಿಲ್ಲ. ತನಿಖೆಯ ನಂತರ ರಿಪೋರ್ಟ್ ಬಂದ ಮೇಲೆ ಕನ್ಫರ್ಮ್ ಆಗುತ್ತೆ” ಎಂದು ತಿಳಿಸಿದರು.