ಧಾರ್ಮಿಕ
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ಶ್ರೀಗಳ ಬೇಟಿ

Views: 210
ಕನ್ನಡ ಕರಾವಳಿ ಸುದ್ದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಆಗಮಿಸಿ ವಿಶೇಷ ಪ್ರವಚನವನ್ನು ನೀಡಿದ್ದಾರೆ.
ದೇವಸ್ಥಾನದ ಪರವಾಗಿ ಆಡಳಿತ ಧರ್ಮದರ್ಶಿ ಕೆ ಶ್ರೀ ರಮಣ ಉಪಾಧ್ಯಾಯ ಹಾಗೂ ಧರ್ಮದರ್ಶಿ ಕೆ ನಿರಂಜನ ಉಪಾಧ್ಯಾಯ ಪರ್ಯಾಯ ಅರ್ಚಕರಾದ ಕೆ ಕೃಷ್ಣಾನಂದ ಉಪಾಧ್ಯಾಯ ಹಾಗೂ ಸಹೋದರರು ಸ್ವಾಮಿಯವರನ್ನು ಪೂರ್ಣ ಕುಂಭ ದೊಂದಿಗೆ ಗೌರವದಿಂದ ಬರಮಾಡಿಕೊಂಡು ಸ್ವಾಗತಿಸಿದರು. ದೇವಳದ ವತಿಯಿಂದ ಹಾಗೂ ಪರ್ಯಾಯ ಅರ್ಚಕರಿಂದ ಮಾಲಿಕೆ ಮಂಗಳಾರತಿಯೊಂದಿಗೆ ಸ್ವಾಮಿಗಳಿಗೆ ಪಾದ ಪೂಜೆಯನ್ನು ಅರ್ಪಿಸಿದ್ದಾರೆ.