ಆರ್ಥಿಕ

ಕುಂದಾಪುರ: ಬ್ಯಾಂಕ್‌ ಖಾತೆಯಿಂದ 5.17 ಲ.ರೂ. ತೆಗೆದು ವಂಚನೆ

Views: 261

ಕನ್ನಡ ಕರಾವಳಿ ಸುದ್ದಿ,

ಕುಂದಾಪುರ: ಬ್ಯಾಂಕ್‌ ಖಾತೆಯಿಂದ 5.17 ಲಕ್ಷ ರೂಗಳನ್ನು ತೆಗೆದು ವಂಚಿಸಿರುವ ಘಟನೆ ನಡೆದಿದೆ.

ಮೀರಾ ಅವರು ಪ್ರದೀಪ ಆಲೂರು ಅವರ ಬ್ಯಾಂಕ್‌ ಖಾತೆಯಿಂದ ಹಣ ತೆಗೆದು ವಂಚಿಸಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಂಕಿನಿಂದ ನಗದನ್ನು ತೆಗೆದು 7 ಬೇರೆ ಬೇರೆ ಖಾತೆಗಳಿಗೆ ಜಮಾವಣೆ ಮಾಡಿ ಪ್ರೈವೇಟ್‌ ಇಕ್ವಿಟಿ ಅಕೌಂಟ್‌ನಲ್ಲಿ ಹೂಡಿಕೆ ಮಾಡಿಕೊಂಡು ಅಧಿಕ ಲಾಭಾಂಶ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ನಂಬಿಕೆ ದ್ರೋಹ ಮಾಡಿದ್ದಾರೆ, ಅತ್ತ ಹಣವು ಇಲ್ಲ, ಇತ್ತ ಲಾಭಾಂಶವೂ ನೀಡದೆ ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!