ಸಾಮಾಜಿಕ
ಮದುವೆಯ ಆರತಕ್ಷತೆಗೆ ಬಂದ ವೇಳೆ ಕರೆಂಟ್ ಶಾಕ್: 4 ವರ್ಷದ ಬಾಲಕ ಸಾವು

Views: 55
ಕನ್ನಡ ಕರಾವಳಿ ಸುದ್ದಿ: ಏರ್ ಕೂಲರ್ ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಕಲ್ಯಾಣಮಂಟಪದಲ್ಲಿ ನಡೆದಿದೆ.
ಇಲ್ಲಿನ ಅಭಿಮಾನಿ ಕನ್ವೆನ್ ಶನ್ ಹಾಲ್ ನಲ್ಲಿ ಈ ಘಟನೆ ನಡೆದಿದ್ದು 4ವರ್ಷದ ಶಿವಂ ಮೃತಪಟ್ಟ ಬಾಲಕ
ಕೆಂಪೇಗೌಡ ನಗರದ ನಿವಾಸಿ ಪ್ರದೀಪ್ ಹಾಗೂ ದೀಪಾ ದಂಪತಿ ಪುತ್ರ. ಸಂಬಂಧಿಕರ ಮದುವೆಯ ಆರತಕ್ಷತೆಗೆ ಬಂದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ತಾಯಿ ದೀಪಾಗೂ ಕರೆಂಟ್ ಶಾಕ್ ಹೊಡೆದು ಗಾಯಗೊಂಡಿದ್ದಾರೆ
ಘಟನೆ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಮಾಲೀಕ ದಿವಾಕರ್, ಮ್ಯಾನೇಜರ್ ಸಂತೋಷ, ಎಲೆಕ್ಟ್ರಿಷಿಯನ್ ಸತೀಶ್ ವಿರುದ್ಧ ದೂರು ದಾಖಲಾಗಿದೆ.