ಸಾಮಾಜಿಕ

ಮಾ.15ರಂದು ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರಿನಲ್ಲಿ “ಮಾಗಣೆ ಗುರಿಕಾರರ ಸಮಾವೇಶ”

Views: 0

ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವೀರೇಶ್ವರ ಸೇವಾ ಸಮಿತಿ, ಸಂಘಟನಾ ಸಮಿತಿ, ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಾರ್ಚ್ 15ರಂದು ಅಪರಾಹ್ನ 3 ಗಂಟೆಗೆ ಮಾಗಣೆ ಗುರಿಕಾರರ ಸಮಾವೇಶ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಗುರಿಕಾರರು ಸಮಾಜವನ್ನು ವ್ಯವಸ್ಥಿತವಾಗಿ ಮುನ್ನಡೆಸುವ, ಮಾರ್ಗದರ್ಶನ ನೀಡುವ, ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯುತ ಸ್ಥಾನ ಹೊಂದಿದ ಅವರಿಗೆ ಶುಭ ಮತ್ತು ಅಪರ ಕ್ರಿಯೆ ಕಾರ್ಯದಲ್ಲಿ ದೇವಸ್ಥಾನದ 7 ಮಾಗಣೆ ವ್ಯಾಪ್ತಿಯ ಬಾರ್ಕೂರು,ವಕ್ವಾಡಿ, ಹೆಂಗವಳ್ಳಿ- ಅಮಾಸೆಬೈಲು,ಬಸ್ರೂರು, ಕೋಟ, ನೀಲಾವರ- ಸೂರಾಲು, ಜಪ್ತಿ ಮಾಗಣೆಯವರಿಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಬಾರಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟಕರು: ಬಾರಕೂರು ರಂಗನಕೇರಿ ಶ್ರೀ. ಶ್ರೀನಿವಾಸ ಶೆಟ್ಟಿಗಾರ. ಆಡಳಿತ ಮೊಕ್ತೇಸರರು, ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರು.

ಸಂಪನ್ಮೂಲ ವ್ಯಕ್ತಿ: ಶ್ರೀ ರಾಜೇಂದ್ರ ಶೆಟ್ಟಿಗಾರ ಬಸ್ರೂರು, ಗುರಿಕಾರರು 

ಸರ್ವರಿಗೂ ಆದರದ ಸ್ವಾಗತ ಬಯಸುವ ಆಡಳಿತ ಮೊಕ್ತೇಸರರು, ಮತ್ತು ಆಡಳಿತ ಮಂಡಳಿ, ಸಹ ಮೊಕ್ತೇಸರರು, ಗುರಿಕಾರರು.ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ವೀರೇಶ್ವರ ಸೇವಾ ಸಮಿತಿ, ಸಂಘಟನಾ ಸಮಿತಿ, ಯುವ ವೇದಿಕೆ, ಮಹಿಳಾ ವೇದಿಕೆ, ಸಮಾಜ ಸೇವಾ ಟ್ರಸ್ಟ್, ಪ್ರಾಯೋಜಕರಾದ ಶ್ರೀಮತಿ ವೀಣಾಶ್ರೀ ಮತ್ತು ಶ್ರೀ ಬಾಲಕೃಷ್ಣ ಶೆಟ್ಟಿಗಾರ್ ದೇವು ಮನೆ ವಕ್ವಾಡಿ.

 

Related Articles

Back to top button
error: Content is protected !!