ಧಾರ್ಮಿಕ
ಉಳ್ಳೂರು ಕಾಡಿನಕೊಂಡ ಕಾರ್ತಿಕೇಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಸುಬ್ರಾಯ ಉಡುಪ ನಿಧನ

Views: 98
ಕುಂದಾಪುರ: ಕುಂದಾಪುರ ತಾಲೂಕಿನ ಬಳ್ಕೂರು ಸುಬ್ರಾಯ ಉಡುಪ (94) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಶನಿವಾರ) ತಮ್ಮ ಬಳ್ಕೂರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಸಜ್ಜನ ಸರಳಿಕೆಯ ಸಾಕಾರ ಮೂರ್ತಿಯಾಗಿ, ಕಾರ್ತಿಕೇಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಉಳ್ಳೂರು ಕಾಡಿನಕೊಂಡ ಇಲ್ಲಿನ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






