ಧಾರ್ಮಿಕ

ಶಂಕರನಾರಾಯಣ: “ಮಗ್ಗದ ಮೇಷ್ಟ್ರು” ಗೋಪಾಲ ಶೆಟ್ಟಿಗಾರರಿಗೆ ಸನ್ಮಾನ

Views: 381

ಕನ್ನಡ ಕರಾವಳಿ ಸುದ್ದಿ: ಗಾಂಧೀಜಿ ಸ್ವದೇಶಿ ಚಳುವಳಿಯ ಪ್ರೇರಣೆ ಪಡೆದು, ನಿತ್ಯ ಜೀವನದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ಶ್ರೀಮಂತ ಪರಂಪರೆಯನ್ನು ಉಳಿಸಿ- ಬೆಳೆಸಿ ಸಂಕಲ್ಪ ತೊಟ್ಟ ಪದ್ಮಶಾಲಿ /ಶೆಟ್ಟಿಗಾರ್ ಸಮಾಜದ ಹಿರಿಯ ಸಾಧಕರಾದ ಶಂಕರನಾರಾಯಣ ನಿವಾಸಿ “ಮಗ್ಗದ ಮೇಷ್ಟ್ರು” ಗೋಪಾಲ ಶೆಟ್ಟಿಗಾರ ಅವರನ್ನು ಶನಿವಾರ ಸನ್ಮಾನಿಸಲಾಯಿತು.

ಇವರಿಂದ ನೇಯ್ಗೆ ತರಬೇತಿ ಪಡೆದ “ನೇಯ್ಗೆ ಮೇಷ್ಟ್ರು” “ಮಗ್ಗದ ಮೇಷ್ಟ್ರು” ಎಂದೇ ಜನ ಮಾನಸದಲ್ಲಿ ಚಿರಪರಿಚಿತರಾದ 95ರ ಹರೆಯದ 36 ವರ್ಷ ನಿವೃತ್ತಿ ಜೀವನ ನಡೆಸುತ್ತಿರುವ ಸುಮಾರು 77 ವರ್ಷಗಳ ಕಾಲ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಸಕ್ರೀಯರಾಗಿ, ಈ ಹಿಂದೆ  ಜೀರ್ಣೋದ್ಧಾರದಲ್ಲಿ ತೊಡಗಿಸಿಕೊಂಡ ಗೋಪಾಲ ಶೆಟ್ಟಿಗಾರ್ ಅವರ ಮನೆಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಾರಕೂರು, ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಗಳು ಇದರ ವತಿಯಿಂದ  ಗೌರವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಟ್ಟಿಗಾರ ರಂಗನಕೆರೆ ಬಾರ್ಕೂರು ಇವರು ಶಂಕರನಾರಾಯಣದ ಅವರ ಸ್ವಗೃಹದಲ್ಲಿ ಗೌರವಿಸಿದರು.ಹಾಗೂ ಬಾರ್ಕೂರು ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರವಾಗಿ ಆಡಳಿತ ಮೊಕ್ತೇಸರರಾದ ಡಾ.ಸಿ.ಜಯರಾಮ್ ಶೆಟ್ಟಿಗಾರ್ ಶ್ರೀ ದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

ಶ್ರೀ ಗೋಪಾಲ್ ಶೆಟ್ಟಿಗಾರ್ ಇವರು ಕುಲ ದೇವಸ್ಥಾನದ ಅಭಿವೃದ್ಧಿಗೆ 2,01,000 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಆಚಾರ್ಯ, ಸತೀಶ್, ದೇವಳದ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ ಸಾಸ್ತಾನ, ನಿವೃತ್ತ  ಉಪನ್ಯಾಸಕ ಸಿ.ಪುರುಷೋತ್ತಮ ಶೆಟ್ಟಿಗಾರ್, ಸಹ ಮೊಕ್ತೇಸರರಾದ  ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ್, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಆಶಾ ವಿಠ್ಠಲ್ ಶೆಟ್ಟಿಗಾರ್, ಶ್ರೀಮತಿ  ಕವಿತಾ ಜಯರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Related Articles

Back to top button