ಯುವಜನ

ಮದುವೆಯಾಗುವುದಾಗಿ ನಂಬಿಸಿ ಗೋವಾಕ್ಕೆ ಕರೆದೊಯ್ದು ಪ್ರಿಯತಮೆಯನ್ನು ಹತ್ಯೆಗೈದ ಪಾಗಲ್ ಪ್ರೇಮಿ

Views: 108

ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ಹೇಳಿ ಗೆಳತಿಯನ್ನು ಗೋವಾಕ್ಕೆ ಕರೆದೊಯ್ದ ಪಾಗಲ್ ಪ್ರೇಮಿ, ಬಳಿಕ ಆಕೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ರೋಷಿಣಿ ಮೋಸೆಸ್ (22) ಕೊಲೆಯಾದ ಯುವತಿ. ಸಂಜಯ್ ಕೆವಿನ್ (22) ಪ್ರಿಯತಮೆಯನ್ನು ಹತ್ಯೆಗೈದ ಪ್ರಿಯಕರ. ಇಬ್ಬರೂ ಬೆಂಗಳೂರು ನಿವಾಸಿಗಳು.

ಜೂನ್ 25ರಂದು ಗೋವಾದಲ್ಲಿ ಮದುವೆಯಾಗಲೆಂದು ಇಬ್ಬರೂ ಬೆಂಗಳೂರಿನಿಂದ ಗೋವಾಕ್ಕೆ ಬಸ್ ನಲ್ಲಿ ತೆರಳಿದ್ದಾರೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬಳಿಕ ಇಬ್ಬರೂ ಪಿಲಿಯೆಮ್-ಧರ್ಬಂದೋರಾದಲ್ಲಿ ಬಸ್ ನಿಂದ ಇಳಿದಿದ್ದಾರೆ. ಸಂಜಯ್, ರೋಷಿಣಿಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಚಾಕುವಿನಿಂದ ಆಕೆಯ ಗಂಟಲು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ

ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿದ್ದ ಪರ್ಸ್ ಪರಿಶೀಲಿಸಿದಾಗ ಅದರಲ್ಲಿ ಹುಬ್ಬಳ್ಳಿಯ ಬಸ್ ಟಿಕೆಟ್ ಇತ್ತು. ಬಳಿಕ ಅದರಲ್ಲಿದ್ದ ಫೋಟೋ, ದಾಖಲೆಗಳನ್ನು ಪರಿಶೀಲಿಸಿದಾಗ ಮೃತ ಯುವತಿ ಬೆಂಗಳೂರು ಮೂಲದವಳು ಎಂಬುದು ಗೊತ್ತಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಸಂಜಯ್ ಎಂಬಾತನನ್ನು ಪ್ರೀತಿಸಿದ್ದಳು ಎಂಬುದು ತಿಳಿದುಬಂದಿದೆ.

ಆರೋಪಿ ಪತ್ತೆಗಾಗಿ ಬಲೆಬೀಸಿದ ಪೊಲೀಸರು ಹುಬ್ಬಳ್ಳಿಯಲ್ಲಿ ಪ್ರಿಯಕರ ಸಂಜಯ್ ನನ್ನು ಬಂಧಿಸಿದ್ದಾರೆ.

Related Articles

Back to top button