ವಕ್ವಾಡಿಯ ಸಮಸ್ತ ಗ್ರಾಮಸ್ಥರಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಊರಿನ ಜನರ ಸುಕ್ಷೇಮಕ್ಕಾಗಿ “ಸಾಮೂಹಿಕ 1008 ತೆಂಗಿನಕಾಯಿ ಮೂಡುಗಣಪತಿ ಮತ್ತು ಮುಡಿ ಅಕ್ಕಿ ಕಡಬಿನ ಸೇವೆ” ಜನವರಿ 25ರಂದು ಅಪರಾಹ್ನ 4 ಗಂಟೆಗೆ ನಡೆಯಲಿದೆ.
ಊರಿನ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿ ಪಾಲ್ಗೊಂಡು ಶ್ರೀ ವಿನಾಯಕ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತಿದ್ದೇವೆ.
ವಿಶೇಷ ಸೂಚನೆ: ಶ್ರೀ ಕ್ಷೇತ್ರದಲ್ಲಿ ನಡೆಯುವ ಮೂಡು ಗಣಪತಿ ಸೇವೆಗೆ ತೆಂಗಿನಕಾಯಿ, ಹೂವು, ಬಾಳೆಹಣ್ಣು, ಸೇವಾ ಕಾಣಿಕೆ ನೀಡುವವರು ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸಭಾಗ್ರಹ ಮತ್ತು ವಕ್ವಾಡಿ ಜನರಲ್ ಮರ್ಚೆಂಟ್ ಜಯರಾಮ್ ಶೆಟ್ಟಿ ಅವರ ಅಂಗಡಿಯಲ್ಲಿ ಜನವರಿ 24ರ ಸಂಜೆ 6 ಗಂಟೆಯೊಳಗೆ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ.