ಇತರೆ

ಕುಂದಾಪುರ: ಬೈಕ್‌ ಸ್ಕಿಡ್‌ ಆಗಿ ಬಿದ್ದು ಗಾಯಾಳು ಸಾವು 

Views: 170

ಕುಂದಾಪುರ:  ಎರಡೂವರೆ ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಬೈಕ್‌ ಸ್ಕಿಡ್‌ ಆಗಿ ಬಿದ್ದು ತಲೆಗೆ ತೀವ್ರ ತರಹದ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದ ಗುಲ್ವಾಡಿಯ ಪ್ರಕಾಶ್‌ (37) ಅವರು ಸಾವನ್ನಪ್ಪಿದ್ದಾರೆ.

ನೇರಳಕಟ್ಟೆಯ ಸಹಕಾರಿ ಸಂಘವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ 2022ರ ಸೆ. 28ರಂದು ಪತ್ನಿಯ ಮನೆಯಾದ ಕೋಣಿಯಿಂದ ಮಾವಿನಕಟ್ಟೆ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಗುಲ್ವಾಡಿ ಉದಯನಗರದ ಜನತಾ ಕಾಲನಿ ಕ್ರಾಸ್‌ ಬಳಿ ಶಾಲಾ ವಾಹನಕ್ಕೆ ಸೈಡ್‌ ಕೊಡುವ ವೇಳೆ ಸ್ಕಿಡ್‌ ಆಗಿ ಬಿದ್ದಿದ್ದರು.

ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಕೋಮಾಗೆ ತಲುಪಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ 4 ಬಾರಿ ಶಸ್ತ್ರಚಿಕಿತ್ಸೆ ನಡೆಸಿ, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿಯೂ ಶಸ್ತ್ರ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಿರಲಿಲ್ಲ. ಬಳಿಕ ಮನೆಯಲ್ಲಿಯೇ ಆರೈಕೆಯಲ್ಲಿದ್ದವರು ಸಾವನ್ನಪ್ಪಿದ್ದಾರೆ. ಸಹೋದರ ಪುನೀತ್‌ ಕುಮಾರ್‌ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!