ಇತರೆ
ಬೆಂಗಳೂರಿನ ವ್ಯಕ್ತಿ ಕುಂಭಾಸಿ ವಸತಿಗೃಹದಲ್ಲಿ ಸಾವು

Views: 163
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಿವಾಸಿ ಕೇಶವ ಮೂರ್ತಿ (58) ಅವರು ಪ್ರವಾಸ ಬಂದ ಸಂದರ್ಭ ವಸತಿಗೃಹದಲ್ಲಿ ತಂಗಿದ್ದವರು ಮೃತಪಟ್ಟಿದ್ದಾರೆ. ಕರಾವಳಿಯ ದೇಗುಲಗಳ ಭೇಟಿಗೆ ಆಗಮಿಸಿದ್ದರು. ಕುಂಭಾಶಿಯ ವಸತಿ ಗೃಹ ಒಂದರಲ್ಲಿ ಅನಾರೋಗ್ಯಕ್ಕೊಳಗಾಗಿ ಮಣಿ ಪಾಲ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಕೇಶವ ಮೂರ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅವರು ಎದೆನೋವಿನಿಂದ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾಗಿ ಅವರ ಪತ್ನಿ ಲಕ್ಷ್ಮೀ ನರಸಮ್ಮ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.