ಇತರೆ
ಕೋಟೇಶ್ವರ: ಮೂಡುಗೋಪಾಡಿಯಲ್ಲಿ ಬಾವಿಯಿಂದ ಮೇಲಕ್ಕೆ ಬರುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಸಾವು

Views: 270
ಕುಂದಾಪುರ: ಬಾವಿಯಿಂದ ಮೇಲಕ್ಕೆ ಬರುವಾಗ ಆಕಸ್ಮಿಕವಾಗಿ ಹಗ್ಗದಿಂದ ಕೈ ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕೋಟೇಶ್ವರ ಸಮೀಪ ಮೂಡುಗೋಪಾಡಿಯಲ್ಲಿ ನಡೆದಿದೆ.
ಬಳ್ಳೂರು ಗ್ರಾಮದ ಸುಭಾಷ್ (50) ಅವರು ಮೃತಪಟ್ಟವರು.
ಅವರು ಅಣ್ಣ ಸುರೇಂದ್ರ ಅವರ ಜತೆ ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ಬಾವಿ ತೋಡುವ ಕೆಲಸಕ್ಕೆ ಹೋಗುತ್ತಿದ್ದರು. ಬಾವಿಯ ರಿಂಗ್ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲು ಅಳವಡಿಸಿದ ಪಿವಿಸಿ ಪೈಪ್ ಬಾವಿಗೆ ಬಿದ್ದಿದ್ದು, ಅದನ್ನು ತೆಗೆಯಲೆಂದು ಅವರು ಇಳಿದಿದ್ದರು. ಹಗ್ಗದ ಸಹಾಯದಿಂದ ಮೇಲೇರುತ್ತಿರುವಾಗ ಆಕಸ್ಮಿಕವಾಗಿ ಹಗ್ಗದಿಂದ ಕೈ ಜಾರಿ ಬಾವಿಗೆ ಬಿದ್ದರು.
ಅವರ ಪುತ್ರ ಅಭಿಷೇಕ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.