ಇತರೆ
ಆಟೋ- ಟ್ರಕ್ ನಡುವೆ ಭೀಕರ ಅಪಘಾತ 12 ಮಂದಿ ಸಾವು

Views: 41
ಉತ್ತರ ಪ್ರದೇಶ: ಟ್ರಕ್ವೊಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ 12 ಜನರು ಸಾವನ್ನಪ್ಪಿದ ಘಟನೆ ಶಹಾಜ್ಹಾನ್ಪುರ್ ಜಿಲ್ಲೆಯಲ್ಲಿ ಗುರುವಾರದಂದು ನಡೆದಿದೆ. ಅಲ್ಲಿನ ಫರೂಖಬಾದ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಮಂಜು ಮುಸುಕಿದ್ದ ಕಾರಣ ಈ ಅಪಘಾತ ನಡೆದಿದೆ ಎಂದು ಅಲ್ಲಾಗ್ಗಂಜ್ ಪೊಲೀಸರು ತಿಳಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದು:ಖ ವ್ಯಕ್ತಪಡಿಸಿದ್ದಾರೆ.
ಇನ್ನು ಸಾವನ್ನಪ್ಪಿದ 12 ಮಂದಿಯ ಮನೆಯವರಿಗೆ ಸಿಎಂ ಯೋಗಿ ಸಾಂತ್ವನ ಹೇಳಿದ್ದಾರೆ. ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಾಗುವ ಎಲ್ಲ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.