ಯುವಜನ
ಅನಾಥಾಶ್ರಮದ ಮಕ್ಕಳಲ್ಲಿ ಫುಡ್ ಪಾಯಿಸನ್: ಓರ್ವ ಸಾವು, 29 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

Views: 75
ಕನ್ನಡ ಕರಾವಳಿ ಸುದ್ದಿ: ಹೋಳಿ ಹಬ್ಬದ ಸಂಭ್ರಮದಲ್ಲಿ ಉದ್ಯಮಿ ಊರ ಜನರಿಗೆ ಊಟ ನೀಡಿ, ಉಳಿದ ಊಟವನ್ನು ಅನಾಥಶ್ರಮದ ಮಕ್ಕಳಿಗೆ ಹಂಚಿದ್ದರು. ಆ ಊಟ ಸೇವಿಸಿದ್ದ ಅನಾಥಾಶ್ರದ ಮಕ್ಕಳು ಪುಡ್ ಪಾಯಿಸನ್ ನಿಂದಾಗಿ ತೀವ್ರ ಅಸ್ವಸ್ಥಗೊಂಡ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು 29 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲುಗೊಂಡ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ.
6ನೇ ತರಗತಿ ವಿದ್ಯಾರ್ಥಿ ಕೇರ್ಲಾಂಗ್ (13) ಫುಡ್ ಪಾಯ್ಸನ್ ನಿಂದ ಮೃತ ಪಟ್ಟಿದ್ದಾನೆ. ಅನಾಥಾಶ್ರಮದಲ್ಲಿ ಅಸ್ವಸ್ಥಗೊಂಡ ಮಕ್ಕಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.