ಮದುವೆ ವಿಚಾರಕ್ಕೆ ಮನೆಯಲ್ಲಿ ಜಗಳ: ಕೆರೆಗೆ ಹಾರಿ ಮಗಳು ಆತ್ಮಹತ್ಯೆ, ರಕ್ಷಿಸಲು ಹೋದ ತಾಯಿಯೂ ಸಾವು

Views: 39
ಕನ್ನಡ ಕರಾವಳಿ ಸುದ್ದಿ: ಮದುವೆ ವಿಚಾರಕ್ಕೆ ನಡೆದ ಜಗಳದಲ್ಲಿ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ,ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ನಡೆದಿದೆ.
ಮನನೊಂದು ಮಗಳು ಕೆರೆಗೆ ಹಾರಿದ್ದು,ಆಕೆಯನ್ನು ರಕ್ಷಣೆ ಮಾಡಲು ಹೋದ ತಾಯಿ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ,ಮೃತರನ್ನು ಮಧುಮತಿ ಹಂಗರಗಿ (22), ತಾಯಿ ಜಗದೇವಿ ಹಂಗರಗಿ (45) ಎಂದು ಗುರುತಿಸಲಾಗಿದೆ.
ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಧುಮತಿಗೆ ವಿವಾಹವಾಗುವಂತೆ ಮನೆಮಂದಿ ಪ್ರಸ್ತಾಪಿಸಿದ್ದರು ಮತ್ತು ವರನ ಹುಡುಕಾಟವೂ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಸೆ.14 ರಾತ್ರಿ ಮದುವೆ ವಿಷಯದಲ್ಲಿ ಮನೆಯವರು ಮತುಕತೆ ನಡೆಸುವಾಗ ಗಲಾಟೆ ನಡೆದಿತ್ತು, ಇದರಿಂದ ಮಧುಮತಿ ಮನನೊಂದಿದ್ದರು.
ಕಳೆದ ರಾತ್ರಿ 9ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದಳು. ಆಕೆಯನ್ನು ಹುಡುಕಿಕೊಂಡು ತಾಯಿ ಕೂಡ ಹೋಗಿದ್ದರು. ತಡರಾತ್ರಿಯಾದರೂ ತಾಯಿ, ಮಗಳು ಇಬ್ಬರೂ ಮನೆಗೆ ಮರಳದೆ ಇದ್ದುದ್ದರಿಂದ ಕುಟುಂಬಸ್ಥರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ನಂತರ ಕೆರೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದೆ. ಮಗಳ ಕೆರೆಗೆ ಹಾರಿರುವುದನ್ನು ಕಂಡ ತಾಯಿ, ಆಕೆಯ ರಕ್ಷಣೆಗೆ ಹೋಗಿ ತಾಯಿಯೂ ಮೃತಪಟ್ಟಿರಬೇಕು ಎಂದು ಶಂಕೆ ವ್ಯಕ್ತವಾಗಿದೆ.
ಆಳಂದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.