ಶಿಕ್ಷಣ

ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದಕ್ಕೆ ಮತ್ತೆ ಭುಗಿಲೆದ್ದ ಆಕ್ರೋಶ

Views: 88

ಕನ್ನಡ ಕರಾವಳಿ ಸುದ್ದಿ: ರಾಜ್ಯದ ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಯಲ್ಲಿ ನಡೆದ ಜನಿವಾರ ಪ್ರಕರಣ ಮಾಸುವ ಮುನ್ನವೇ,ಇದೀಗ ಮತ್ತೆ ಕಲಬುರಗಿ ನಗರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ನಗರದ ಎಸ್ ಬಿ.ಟೆಂಪಲ್ ರಸ್ತೆಯಲ್ಲಿನ ಸೆಂಟ್ ಮೇರಿ ಶಾಲೆಯಲ್ಲಿ ನೀಟ್ ಪರೀಕ್ಷೆ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಬೀದ‌ರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬೇಟ್ ಬಾಲಕುಂದಾ ಗ್ರಾಮದ ವಿದ್ಯಾರ್ಥಿ ಶ್ರೀಪಾದ ಸುಧೀ‌ರ್ ಪಾಟೀಲ್‌ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯಲೆಂದು ಕಲಬುರಗಿ ಕೇಂದ್ರಕ್ಕೆ ಬಂದಿದ್ದನು.ಪರೀಕ್ಷೆ ಬರೆಯಲು ಕೇಂದ್ರದ ಒಳಗಡೆ ಹೋಗುವಾಗ ಜನಿವಾರ ತೆಗೆದು ಒಳಗಡೆ ಹೋಗು ಇಲ್ಲಾಂದ್ರೆ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ ಎಂದು ತಪಾಸಣಾ ಅಧಿಕಾರಿ ಹೇಳಿದಕ್ಕೆ ವಿದ್ಯಾರ್ಥಿ ಭವಿಷ್ಯದ ಹಿತದೃಷ್ಟಿಯಿಂದ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾನೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಬ್ರಾಹ್ಮಣ ಸಮಾಜದ ಮುಖಂಡರು, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

 

Related Articles

Back to top button