ಇತರೆ
ಕುಂದಾಪುರ: ಹೆಂಗವಳ್ಳಿಯಲ್ಲಿ ಆಕಸ್ಮಿಕ ಬಾವಿಗೆ ಬಿದ್ದು ಶಾಲಾ ಬಾಲಕಿ ಸಾವು

Views: 278
ಕುಂದಾಪುರ: ಅಡಕೆ ತೋಟಕ್ಕೆ ನೀರು ಹಾಯಿಸಲೆಂದು ಹೋದ ಶಾಲಾ ಬಾಲಕಿ. ಹೆಂಗವಳ್ಳಿ ಗ್ರಾಮದ ಕೃಷ್ಣ ಅವರು ಪುತ್ರಿ ಅಕ್ಷಯಾ (16) ಆಕಸ್ಮಿಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆಯಿತು.
ಅಮಾಸೆಬೈಲು ಪ್ರೌಢಶಾಲೆಯ 10ನೇ ತರಗತಿಯಲ್ಲಿ ಓದುತ್ತಿರುವ ಈಕೆ ಸಂಜೆ ಶಾಲೆಯಿಂದ ಮನೆಗೆ ಬಂದು ಮನೆಯ ಪಕ್ಕದಲ್ಲಿರುವ ಅಡಕೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಆಕಸ್ಮಿಕವಾಗಿ ತೋಟದ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ