ಕುಂದಾಪುರ: ತಾಲೂಕಿನಾದ್ಯಂತ ಡಿ.6 ರಂದು ವಿವಿದೆಡೆ ವಿದ್ಯುತ್ ನಿಲುಗಡೆ

Views: 205
ಮಂಗಳೂರು, ಕುಂದಾಪುರ ತಾಲೂಕಿನ ವಿವಿದೆಡೆ ಡಿ.6 ರಂದು ವಿದ್ಯುತ್ ನಿಲುಗಡೆ ಬಗ್ಗೆ ಪ್ರಕಟಣೆ
ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ 110 ಕೆ.ವಿ ಹಿರಿಯಡ್ಕ-ಬಾರ್ಕೂರು- ಮಧುವನ ವಿದ್ಯುತ್ ಮಾರ್ಗದ ಇನ್ಸುಲೇಟರ್ಗಳನ್ನು ಬದಲಾವಣೆ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ 110/11 ಕೆ.ವಿ ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದ ಹಾಗೂ ಹಾಗೂ 33/11 ಕೆ.ವಿ ಉಪಕೇಂದ್ರಗಳಾದ ತಲ್ಲೂರು,ಬೈಂದೂರು, ಕೊಲ್ಲೂರು, ಗಂಗೊಳ್ಳಿ ಮತ್ತು ಜಿ.ಐ.ಎಸ್ ಕೋಟ ಗಳಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳ ಜೊತೆಗೆ 33 ಕೆ.ವಿ.ಕುಂದಾಪುರ-ಗಂಗೊಳ್ಳಿ ಮಾರ್ಗ, 33 ಕೆ.ವಿ ಸೌಪರ್ಣಿಕಾ ಏತ ನೀರಾವರಿ ಸ್ಥಾವರ ಆಲೂರು, 33 ಕೆ.ವಿ ಸೌಕೂರು ಏತ ನೀರಾವರಿ ವಿದ್ಯುತ್ ಮಾರ್ಗ ಹಾಗೂ ಮೆ|| ಕೊಂಕಣ ರೈಲ್ವೆ ನಿಗಮ ನಿಯಮಿತದ 110 ಕೆವಿ ಸೇನಾಪುರ ಟಿಎಸ್ಎಸ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ನಿಲುಗಡೆ
ಕುಂದಾಪುರ ಪುರಸಭೆ ವ್ಯಾಪ್ತಿಯ ಟಿ.ಟಿ ರೋಡ್, ಬಿ.ಸಿ ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ,ಮೊಳಹಳ್ಳಿ, ಜಪ್ತಿ ವಾಟರ್ಸಪ್ಲೈ ಅಂಪಾರು ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೊರ್ಗಿ, ಅಸೋಡು, ಯಡಾಡಿ-ಮತ್ಯಾಡಿ,ಬೀಜಾಡಿ, ಗೋಪಾಡಿ, ವಕ್ವಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಣಿ, ಕಂದಾವರ, ಬಸ್ರೂರು, ಬಳ್ಕೂರು, ಆನಗಳ್ಳಿ, ಕೋಡಿ, ಎಂ.ಕೋಡಿ ಮತ್ತುಅಂಕದಕಟ್ಟೆ, ಶಿರೂರು, ತೂದಳ್ಳಿ, ಹೇರಂಜಾಲು, ಬವಳಾಡಿ, ಕಂಬದಕೋಣೆ, ಹೇರೂರು, ಕಾಲ್ತೋಡು, ಉಳ್ಳೂರು-11, ವರ್ಸೆ, ಆಲೂರು,ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು,ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಜಡ್ಕಲ್, ಇಡೂರು-ಕುಂಜ್ಞಾಡಿ, ಅರೆಶಿರೂರು, ಎಲ್ಲೂರು, ಬಾಳ್ಕೊಡ್ಲು, ಹಾಲ್ಕಲ್,ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ, ಸೆಳ್ಕೊಡು, ಕಾನ್ಕಿ, ಮೆಕ್ಕೆ, ಗೋಳಿಹೊಳೆ,ಮುದೂರು, ಅರೆಹೊಳೆ,ನಾಗೂರು, ಬೈಂದೂರು, ಯಡ್ತರೆ, ತಗ್ಗರ್ಸೆ, ಕರ್ಕುಂಜೆ, ಬಿಜೂರು, ಕೊಲ್ಲೂರು, ಉಪ್ಪುಂದ, ಪಡುವರಿ, ನಂದನವನ,ಕೆರ್ಗಾಲ್, ಕಂಬದಕೋಣೆ, ಯಳಜಿತ್, ನಾಯ್ಕನಕಟ್ಟೆ, ಹೊಸೂರು, ಗಂಗನಾಡು, ಗೋಳಿಹೊಳೆ ಹಾಗೂ ಕೊಲ್ಲೂರು, ಹೇರಂಜಾಲು,ಬವಳಾಡಿ, ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು,ಕರ್ಕುಂಜೆ, ಕಾವ್ರಾಡಿ, ಅಂಪಾರು, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ,ಕನ್ಯಾನ, ಕೆಂಚನೂರು, ನೇರಳಕಟ್ಟೆ, ಹೆಮ್ಮಾಡಿ, ಕಟ್ಬೆಲ್ತೂರು, ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.