ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಾಳೆ ಅಗಸ್ಟ್ 22 ರಂದು “ಸಂಕಷ್ಟಹರ ಚತುರ್ಥಿ”

Views: 48
ಕುಂದಾಪುರ:ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಾಳೆ ಅಗಸ್ಟ್ 22ರಂದು ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತದೆ.
ಬೆಳಿಗ್ಗೆ 5.30 ಗೆ ನಿರ್ಮಾಲ್ಯ ಪೂಜೆ, 11 ಗಂಟೆಗೆ ಪಂಚಾಮೃತ ಪೂರ್ವಕ ಉಪನಿಷತ್ ಕಲಶಾಭಿಷೇಕ, 12 ಗಂಟೆಗೆ ಸಹಸ್ರ ನಾರಿಕೇಳ ಗಣಹೋಮದ ಪೂರ್ಣಾಹುತಿ.
ಮದ್ಯಾಹ್ನ 1 ಗಂಟೆಗೆ ಸತ್ಯಗಣಪತಿ ವೃತ ಸಹಿತ ಮಹಾಪೂಜೆ, ರಾತ್ರಿ 8.30ಕ್ಕೆ ಮಹಾರಂಗಪೂಜೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.