ಇತರೆ

ಕುಂದಾಪುರ: ನಿವೃತ್ತ ಶಿಕ್ಷಕ ನಾಪತ್ತೆ, ವಂಡ್ಸೆ ಹೊಳೆಗೆ ಹಾರಿ ಆತ್ಮಹತ್ಯೆ ಶಂಕೆ?

Views: 318

ಕನ್ನಡ ಕರಾವಳಿ ಸುದ್ದಿ: ನಿವೃತ್ತ ಶಿಕ್ಷಕರೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ವಂಡ್ಸೆಯ ಚಕ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ವಂಡ್ಸೆ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾಗಿರುವ ಕುಕ್ಕೆಹಳ್ಳಿ ಗ್ರಾಮದ ಸರ್ವೋತ್ತಮ(79) ಎಂಬವರು ಜೂನ್  16 ರಂದು ಬೆಳಿಗ್ಗೆ ಮನೆಯಲ್ಲಿ ಯಾರಿಗೂ ತಿಳಿಸದೇ ಹೋಗಿದ್ದು, ಹುಡುಕಾಟ ನಡೆಸಿದಾಗ ಇವರು ವಂಡ್ಸೆ ಎಂಬಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಬಂತು.ಅಲ್ಲಿ ನೋಡಿದಾಗ ಅವರಿಗೆ ಸೇರಿದ ಚಪ್ಪಲಿ, ವಾಚ್‌, ಬಸ್‌ ಟಿಕೆಟ್, ಹಾಗೂ ಮೊಬೈಲ್ ವಂಡ್ಸೆ ಸೇತುವೆಯ ಬಳಿ ಸಿಕ್ಕಿದ್ದು, ಸರ್ವೋತ್ತಮ ಹೆಗ್ಡೆ ವಂಡ್ಸೆಯ ಚಕ್ರಾ ನದಿಗೆ ಹಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಕೊಂಡು ಹೋಗಿ ನಾಪತ್ತೆಯಾಗಿರಬಹುದು ಅಥವಾ ಅವರು ತನಗೆ ಸೇರಿದ ಈ ಎಲ್ಲ ಸೊತ್ತುಗಳನ್ನು ಇಲ್ಲಿಯೇ ಬಿಟ್ಟು ನಾಪತ್ತೆಯಾಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button