ಕನ್ನಡ ಕರಾವಳಿ ಸುದ್ದಿ: ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಬಹುಮುಖ ಪ್ರತಿಭಾವಂತ ಬಸ್ರೂರು ವಿವೇಕಾನಂದ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ಸಾಮಾಜಿಕ ,ಶೈಕ್ಷಣಿಕ ,ಅಸಕ್ತರ ಸಹಾಯಧನ ಹಾಗೂ ವಿವಿಧ ಕ್ರೀಡಾಕೂಟ ಆಯೋಜಿಸಿ ಯಶಸ್ವಿಗೊಂಡಿರುವ ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ) ಬಸ್ರೂರಿಗೆ ರಾಜ್ಯದ ಹೆಸರಾಂತ ಸಂಸ್ಥೆಯಾಗಿರುವ ನಾಟ್ಯಮಯೂರಿ ನೃತ್ಯ ಟ್ರಸ್ಟ್ (ರಿ) ಇವರ ವತಿಯಿಂದ ,ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಾಡಿನ ಏಳಿಗೆಗಾಗಿ ಗಣನೀಯ ಸೇವೆಗೆ ಸಂಸ್ಥೆಯಿಂದ ಗೌರವಿಸುವ ಕಾರ್ಯದಲ್ಲಿ ಬಸ್ರೂರು ಸ್ಪೋರ್ಟ್ಸ್ ಕ್ಲಬ್ ನ್ನು ಗುರುತಿಸಿ ಈ ಪ್ರಶಸ್ತಿಗಾಗಿ ಆಯ್ಕೆ ಮಾಡಿರುತ್ತಾರೆ.
ಬಹುಮುಖ ಪ್ರತಿಭಾವಂತ ವಿವೇಕಾನಂದ ಶೆಟ್ಟಿಗಾರ್ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಅವರು ಮಾಡಿದ ನಿರಂತರ ಸಾಧನೆಯನ್ನು ಗುರುತಿಸಿ ಅರ್ಹವಾಗಿ ಈ ಪ್ರಶಸ್ತಿ ಬಂದಿದೆ.
ಇವರು ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಹ ಮೊಕ್ತೇಸರರಾಗಿದ್ದಾರೆ.
ದಿನಾಂಕ 15-6-2025ರ ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ .