ಹನಿಮೂನ್ಗೆ ಹೋಗಿ ಗಂಡನನ್ನು ಕೊಲೆ ಮಾಡಿಸಿದ ರಹಸ್ಯ ವಿಚಾರ ಬಯಲು!

Views: 250
ಕನ್ನಡ ಕರಾವಳಿ ಸುದ್ದಿ: ಸೋನಂಗೆ ರಘುವಂಶಿ ಇಷ್ಟ ಇಲ್ಲದೇ ಇದ್ದರೆ ಮದುವೆ ಕ್ಯಾನ್ಸಲ್ ಮಾಡ್ಕೋಬಹುದಾಗಿತ್ತು. ಒಂದ್ ವೇಳೆ ಮದುವೆ ಆದಮೇಲೆ ದೂರ ಆಗಬೇಕು ಅನ್ನಿಸಿದರಘ ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇತ್ತು. ಆದರೆ ತನ್ನ ಸ್ವಾರ್ಥಕ್ಕೆ ಇನ್ನೊಂದು ಜೀವ ಬಲಿ ಪಡೆದಿದ್ದು ಖಂಡಿತವಾಗಿಯೂ ತಪ್ಪು ಈ ರಾಕ್ಷಸಿ ಆ ಕೆಲಸ ಮಾಡಿಲ್ಲ. ಅದನ್ನ ಬಿಟ್ಟು ಲವರ್ ಜೊತೆ ಸೇರಿ ಹತ್ಯೆಗೆ ಸ್ಕೇಚ್ ಹಾಕಿದ್ದಾಳೆ.
ಹನಿಮೂನ್ಗೆ ಬೇಡ ಅಂದರೂ ಒತ್ತಾಯ ಮಾಡಿ ಕರೆದು ಕೊಂಡು ಹೋಗಿ ಗಂಡನಿಗೆ ಮುಹೂರ್ತ ಇಟ್ಟಿದ್ದಾಳೆ. ಇದು ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದ ಸ್ಟೋರಿ. ಹಾಗಾದ್ರೆ, ಆಗ ತಾನೇ ಮದುವೆಯಾಗಿದ್ದ ಸೋನಮ್ ತನ್ನ ಗಂಡನಿಗೆ ಸ್ಕೆಚ್ ಹಾಕಿದ್ದು ಯಾಕೆ? ಆಕೆಯ ಭವಿಷ್ಯದ ಪ್ಲಾನ್ ಏನಾಗಿತ್ತು?
ಮೇ 20ಕ್ಕೆ ಹನಿಮೂನ್ಗೆ ಹೋಗಿದ್ದ ರಾಜಾ ರಘುವಂಶಿ ಮತ್ತು ಸೋನಮ್ ಜೋಡಿ ಮೇ 23ಕ್ಕೆ ಕಣ್ಮರೆಯಾಗಿ ಬಿಡ್ತಾರೆ. ಪೊಲೀಸರು ಡ್ರೋನ್ಗಳನ್ನು ಬಳಸಿ, ಸ್ಥಳೀಯರನ್ನು ನೆರವು ಪಡೆದು ಕೊಂಡು, ರಘುವಂಶಿ ದುಷ್ಕರ್ಮಿಗಳಿಂದ ಕೊಲೆಯಾಗಿರಬೇಕು ಅಂತಾ ಪೊಲೀಸರು ಹುಡುಕಾಡ್ತಾರೆ. ಆದರೆ, ಎಲ್ಲಿಯೂ ಸೋನಮ್ ದೇಹ ಪತ್ತೆಯಾಗೋದಿಲ್ಲ. ಅದಾಗ್ಲೇ ಪೊಲೀಸರು ಸೋನಮ್ ಫೋನ್ ಮೇಲೆ ಕಣ್ಣಿಟ್ಟಿದ್ದಾರೆ. ಆಕೆ ಯಾರ್ ಯಾರ ಜೊತೆ ಮಾತಾಡಿದ್ದಾಳೆ? ಯಾರನ್ನು ಸಂಪರ್ಕ ಮಾಡಿದ್ದಾಳೆ? ಅನ್ನೋದನ್ನು ಗೊತ್ತು ಮಾಡ್ಕೊಂಡು ಈ ನಡುವೆ ಜೂನ್ 9 ರಂದು ಸೋನಮ್ ಏಕಾಏಕಿ ಉತ್ತರ ಪ್ರದೇಶದ ಗಾಜಿಪುರ್ದ ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಾಳೆ. ತಾನು ಮೇಘಾಲಯದಲ್ಲಿ ಹನಿಮೂನ್ಗೆ ಹೋದಾಗ ದುಷ್ಕರ್ಮಿಗಳು ಬಂದವರು ತನ್ನ ಗಂಡನನ್ನು ಸಾಯಿಸಿ ಬಿಟ್ಟಿದ್ದಾರೆ. ಆಮೇಲೆ ತನ್ನನ್ನ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ತಂದು ಡಾಬಾ ಬಳಿ ಬಿಟ್ಟು ಹೋದರು ಅನ್ನೋ ಕಥೆ ಹೇಳ್ತಾಳೆ. ಆದರೆ, ಸೋನಮ್ ಮೊಬೈಲ್ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರಿಗೆ ಸತ್ಯ ಕಥೆ ಏನು ಅನ್ನೋದು ಗೊತ್ತಿತ್ತು. ಹೀಗಾಗಿ ಅದನ್ನು ಪೊಲೀಸರು ನಂಬಲಿಕ್ಕೆ ಹೋಗಿಲ್ಲ.
ಅಪ್ಪನ ಕಾರ್ಖಾನೆಯಲ್ಲಿಯೇ ಸೋನಮ್ಗೆ ಹುಟ್ಟಿತ್ತು ಪ್ರೀತಿ!
ಪೊಲೀಸರು ಕಾಣಿಯಾದವರ ಪತ್ತೆಗೆ ಹುಡುಕುವಾಗ ತನಿಖೆ ಶುರು ಮಾಡಿದರು. ಆವತ್ತು ಯಾರ ಯಾರ ಆ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಿದ್ರೋ? ಅವರೆಲ್ಲರನ್ನೂ ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ರಾಜಾ ರಘವಂಶಿ ಮತ್ತು ಸೋನಮ್ ಇಬ್ಬರ ಟ್ರಕ್ಕಿಂಗ್ ಹೋಗಿಲ್ಲ. ಅವರ ಜೊತೆ ಇನ್ನೂ ಮೂವರು ಇದ್ದಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಹೀಗಾಗಿ ಅವರೇ ಸುಪಾರಿ ಹಂತಕರು ಅನ್ನೋದನ್ನು ಪೊಲೀಸರು ಗೊತ್ತು ಮಾಡಿದರು. ನಿರೀಕ್ಷೆ ಅಂತೆ ಹಾಗೇ ಆಗಿತ್ತು. ಸೋನಮ್ ತನ್ನ ಗಂಡನ ಹತ್ಯೆಗಾಗಿ 20 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಳು. ಆಗ ತಾನೆ ಮದುವೆಯಾಗಿದ್ದ ಸೋನಮ್ ಯಾಕೆ ಹಾಗೇ ಮಾಡಿದಳು ಅಂತಾ ನೋಡುತ್ತಾ ಹೋದರೆ ಕಾಣಿಸೋದು ಆಕೆಗೆ ಒಬ್ಬ ಲವರ್ ಇದ್ದ ಅನ್ನೋದು.
ಸೋನಮ್ ತಂದೆಯದ್ದು ಸಣ್ಣ ಪ್ಲೇವುಡ್ ಕಾರ್ಖಾನೆಯೊಂದು ಇತ್ತು. ಅದೇ ಕಾರ್ಖಾನೆಯಲ್ಲಿ ರಾಜ್ ಕುಶ್ವಾಹ ಅನ್ನೋನು ಕೆಲಸಕ್ಕೆ ಇದ್ದ. ಈಕೆ ಆಗಾಗ ಕಾರ್ಖಾನೆಗೆ ಬಂದು ಹೋಗ್ತಾ ಇದ್ದಳು. ಅವರ ಸಂಬಳ ವ್ಯವಹಾರವನ್ನು ಈಕೆಯೇ ನೋಡಿಕೊಳ್ತಾ ಇದ್ದಳು. ಆವಾಗ್ಲೇ ನೋಡಿ ಸೋನಮ್ಗೂ, ರಾಜ್ ಕುಶ್ವಾಹಗೂ ಪರಿಚಯವಾಗಿದೆ. ಅದೇ ಪರಿಚಯ ಪ್ರೇಮಕ್ಕೆ ತಿರುಗಿದೆ. ಆದರೆ, ಕಾರ್ಖಾನೆಯಲ್ಲಿ ಯಾರಿಗೂ ಸಂದೇಹ ಬರಬಾರದು ಅನ್ನೋ ಹಿನ್ನೆಲೆಯಲ್ಲಿ ಸೋನಮ್ ಅನ್ನ ದೀದಿ ಅಂತಾ ಕುಶ್ವಾಹ ಕರೆಯುತ್ತಿದ್ದ. ಆದರೆ ಕಾರ್ಖಾನೆಯಲ್ಲಿ ಇದ್ದವರಿಗೆ ಇವರಿಬ್ಬರ ಪ್ರೀತಿ ಗೊತ್ತಾಗಿತ್ತು. ಆದ್ರೆ, ಸೋನಮ್ ಮದುವೆ ಆದ್ಮೇಲೆ ದೂರ ದೂರ ಆಗ್ತಾರೆ ಅಂತಾ ನಿರೀಕ್ಷೆ ಮಾಡಿದ್ದರು. ಯಾವುದೇ ಕಾರಣಕ್ಕೂ ಹತ್ಯೆ ಮಾಡೋ ಹೀನ ಕೆಲ್ಸಕ್ಕೆ ಇಳಿತಾರೆ ಅನ್ನೋ ನಿರೀಕ್ಷೆ ಅವರಿಗೂ ಇಲ್ಲವಾಗಿತ್ತು.
ಸೋನಮ್ಗೂ? ರಾಜ್ ಕುಶ್ವಾಹಗೂ? ಲವ್ ಇತ್ತು. ಹಾಗೇ ತಾವಿಬ್ಬರು ಮದುವೆ ಆಗ್ಬೇಕು ಅಂತಾನೂ ತೀರ್ಮಾನ ಮಾಡಿದ್ರು. ಆದ್ರೆ, ಅಪ್ಪಿ ತಪ್ಪಿ ಏನಾದ್ರೂ ತಾವ್ ಮದುವೆ ಆದ್ರೆ ಸೋನಮ್ಗೆ ತಮ್ಮ ತಂದೆ ಹಾರ್ಟ್ ಪೇಷಂಟ್ ಆಗಿರೋದ್ರಿಂದ ಸಮಸ್ಯೆ ಆಗುತ್ತೆ ಅಂತಾ ಯೋಚನೆ ಮಾಡಿದ್ದಾಳೆ. ಯಾಕಂದ್ರೆ, ರಾಜ್ ಕುಶ್ವಾಹ ಕೇವಲ ಕೆಲಸಗಾರನಾಗಿದ್ದ. ಹೀಗಾಗಿ ಯಾವುದೇ ಕಾರಣಕ್ಕೂ ತಂದೆ ಮದುವೆಗೆ ಒಪ್ಪಿಕೊಳ್ಳುವುದಿಲ್ಲ ಅನ್ನೋದ್ ಸೋನಮ್ಗೂ ಗೊತ್ತಿತ್ತು ಕುಶ್ವಾಹಗೂ ಗೊತ್ತಿತ್ತು. ಹೀಗಾಗಿ ಸೋನಮ್ಗೆ ಒಂದ್ ಮದುವೆ ಆಗ್ಲಿ ಅಂತಾ ತೀರ್ಮಾನ ಮಾಡ್ತಾರೆ. ಆವಾಗ ಮದುಮಗನನ್ನು ಸಾಯಿಸಿ ತಾವಿಬ್ಬರು ಜೊತೆಯಾಗಿ ಇರಬೇಕು ಅಂತಾ ಪ್ಲಾನ್ ಮಾಡ್ಕೊಂಡಿದ್ದಾರೆ.
ಆ ಪ್ರಕಾರವೇ ರಾಜಾ ರಘುವಂಶಿಯ ಹತ್ಯೆಗೆ ಪ್ಲ್ಯಾನ್ ಮಾಡಿದ್ದಾರೆ. ಆಮೇಲೆ ರಘುವಂಶಿ ಮರ್ಡರ್ ಆದ್ಮೇಲೆ ಸೋನಮ್ ತಂದೆ ಶಾಕ್ ಆಗ್ತಾರೆ. ಅಂತಾ ಸಂದರ್ಭದಲ್ಲಿ ನಿಮ್ಮ ಮಗಳಿಗೆ ತಾನು ಬಾಳು ಕೊಡ್ತೀನಿ ಅಂತಾ ಕುಶ್ವಾಹ ಹೀರೋ ರೀತಿಯಲ್ಲಿ ಎಂಟ್ರಿಯಾಗೋ ತೀರ್ಮಾನವಾಗಿತ್ತು. ಎಲ್ಲವೂ ನಿರೀಕ್ಷೆ ಅಂತೇ ನಡೆದ್ರೆ ಖಂಡಿತ ಹಾಗೇ ಆಗ್ತಾ ಇತ್ತು. ಆದ್ರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ತಾವು ಏನೇ ಮಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಕೊಳ್ತೀವಿ ಅನ್ನೋ ಸಾಮಾನ್ಯ ಜ್ಞಾನ ಇದ್ರೆ ಖಂಡಿತ ಅಂತಾ ಪ್ಲಾನ್ ಮಾಡ್ತಾ ಇರ್ಲಿಲ್ಲ. ಮರ್ಡರ್ ಮಾಡೋದಕ್ಕೂ ಹೋಗ್ತಾ ಇರ್ಲಿಲ್ಲ.
ರಘುವಂಶಿನ ಮದುವೆ ಆಗೋದಕ್ಕೆ ಸೋನಮ್ಗೆ ಇಷ್ಟ ಇರಲಿಲ್ಲ!
ಮೇ 11 ರಂದು ಮದುವೆಯಾಗಿತ್ತು. ಅದಕ್ಕೂ ಮುನ್ನವೇ ಸುಮಾರು 1 ತಿಂಗಳು ಹಿಂದೆ ನಿಶ್ಚಿತಾರ್ಥವಾಗಿತ್ತು. ಸಾಮಾನ್ಯವಾಗಿ ನಿಶ್ಚಿತಾರ್ಥ ಆದ್ಮೇಲೆ ಹುಡುಗು ಹುಡುಗಿ ಭೇಟಿ ಮಾಡೋದು ಸಹಜ. ಕನಿಷ್ಠ ಕಾಫಿ ಕುಡಿಯೋದಕ್ಕಾದ್ರೂ ಸೇರ್ತಾರೆ. ರಘುವಂಶಿಗೆ ತಾನು ತನ್ನ ಭಾವಿ ಪತ್ನಿ ಜೊತೆ ಮಾತಾಡ್ಬೇಕು. ಅವಳ ಜೊತೆ ಸುತ್ತಾಡ್ಬೇಕು ಅನ್ನೋ ಆಸೆ ಇತ್ತು. ಆದ್ರೆ, ಸೋನಮ್ ಒಂದೇ ಒಂದ್ ದಿನವೂ ಭೇಟಿಯಾಗಿರ್ಲಿಲ್ಲ. ಕಾರಣ ಏನು ಅಂತಾ ಕೇಳಿದ್ರೆ ಆಫೀಸ್ನಲ್ಲಿ ಕೆಲ್ಸ ಇರುತ್ತೆ ಅಂತಾ ಹೇಳಿಕೊಳ್ತಾ ಇದ್ದಳಂತೆ. ಆಕೆಯ ನಡೆ ನುಡಿ ನೋಡ್ತಾ ಇದ್ರೆ ಖಂಡಿತ ಆಕೆಗೆ ಮದುವೆ ಇಷ್ಟ ಇಲ್ಲ ಅನ್ನೋದ್ ಪಕ್ಕಾ ಆಗಿತ್ತು.