ಕರಾವಳಿ
ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಖ್ಯಾತ ಚಿತ್ರ ನಟ ಉಪೇಂದ್ರ ಬೇಟಿ

Views: 273
ಕನ್ನಡ ಕರಾವಳಿ ಸುದ್ದಿ: ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಡಿ.29 ರಂದು ರಂದು ಖ್ಯಾತ ಚಿತ್ರ ನಟ ಶ್ರೀ ಉಪೇಂದ್ರ ಹಾಗೂ ಮತ್ತಿತರರು ದೇವರ ದರ್ಶನ ಆಗಮಿಸಿದ್ದರು.
ಶ್ರೀದೇವಸ್ಥಾನದ ವತಿಯಿಂದ ಅವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ , ದೇವಾಲಯದ ಆಡಳಿತ ಮೊಕ್ತೇಸರ ಶ್ರೀ ಶ್ರೀರಮಣ ಉಪಾಧ್ಯಾಯ, ಹಿರಿಯ ಅರ್ಚಕ ಹಾಗೂ ಮಾಜಿ ಮೊಕ್ತೇಸರರಾದ ಶ್ರೀ ಕೆ ಸೂರ್ಯನಾರಾಯಣ ಉಪಾಧ್ಯಾಯರು, ಮೊಕ್ತೇಸರ ಶ್ರೀ ನಿರಂಜನ ಉಪಾದ್ಯಾಯರು ಪರ್ಯಾಯ ಅರ್ಚಕರಾದ ಶ್ರೀ ಕೃಷ್ಣಾನಂದ ಉಪಾಧ್ಯಾಯರು, ಅರ್ಚಕ ಮಂಡಳಿ ಸದಸ್ಯರು, ದೇವಳದ ವ್ಯವಸ್ಥಾಪಕರು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.