ಕರಾವಳಿ

ನೇಜಾರು ಮನೆಗೆ ಹ್ಯುಮಾನಿಟಿ ಫೌಂಡೇಶನ್ ಭೇಟಿ ನೀಡಿ ಸಾಂತ್ವನ

Views: 0

ಉಡುಪಿ,  ಇತ್ತೀಚೆಗೆ ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದ ಮನೆಗೆ ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಸಂಘಟನೆಯ ಸದಸ್ಯರು ಇಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂರು ಮುಹಮ್ಮದ್, ಅತೀ ಶೀಘ್ರವಾಗಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕ್ರಮ ಶ್ಲಾಘನೀಯ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನನ್ನ ಆಗ್ರಹವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸೀರ್ ಟಿ.ಎಸ್., ಕಾರ್ಯದರ್ಶಿ ಸೈಫುಲ್ಲಾ, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಉಪಾಧ್ಯಕ್ಷ ಆಸೀಫ್ ಕುತ್ತಾರ್, ಸಂಚಾಲಕ ಮುಹಮ್ಮದ್ ಹನೀಫ್, ಝಮೀರ್, ಇಸ್ಮಾಯಿಲ್ ಕಾಟುಂಗರೆ, ಪತ್ರಕರ್ತ ಬಶೀರ್ ಕಲ್ಕಟ್ಟ, ಹಮೀದ್ ಉಡುಪಿ, ಸಜನ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button