ರಾಜಕೀಯ

ನೂತನ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರಿಯಾಂಕಾ ಗಾಂಧಿ 

Views: 37

ಕನ್ನಡ ಕರಾವಳಿ ಸುದ್ದಿ: ಸಂಸತ್ತಿನಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ನೂತನ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿಯನ್ನು ಕಟುವಾಗಿ ತರಾಟೆಗೆತ್ತಿಕೊಂಡರು.

ಅತ್ಯಾಚಾರಕ್ಕೊಳಪಡಿಸಿದ ವ್ಯಕ್ತಿಗಳ ಬೆಂಬಲಕ್ಕೆ ಜೋಶಿ ನಿಂತಿದ್ದರು. ಅವರನ್ನು ಶಿಕ್ಷಣ ಸಚಿವರನ್ನಾಗಿಸಿ ಮೋದಿ ದೇಶಕ್ಕೆ ಏನು ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಪ್ರಿಯಾಂಕಾ ಹೇಳಿಕೆಯನ್ನು ಸಂಸತ್ತಿನ ಹೊರಗೆ ಸಮರ್ಥಿಸಿಕೊಂಡ ರಾಹುಲ್ ಗಾಂಧಿ, ಮೋದಿ ಅತ್ಯಂತ ಕೊಳಕು ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಾರೆ ಎಂದು ಹೇಳಿ ವಿವಾದಕ್ಕೆ ಕಾರಣವಾದರು.

ಪ್ರಿಯಾಂಕಾ ಮಾತುಗಳಿಗೆ ಪ್ರಲ್ಲಾದ್ ಜೋಶಿ, ಕಿರಣ್ ರಿಜಿಜು, ಎನ್‌ಡಿಎ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತುಗಳನ್ನು ಕಡತದಿಂದ ತೆಗೆದುಹಾಕಲು ಸ್ಪೀಕರ್ ಓಂ ಬಿರ್ಲಾ ಆದೇಶಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಿಬ್ಬರೂ ಬಾವಿಗಿಳಿದು ಪರಸ್ಪರ ‘ಜಗಳಂದಿ’ ನಡೆಸಿದರು.

ಪ್ರಿಯಾಂಕಾ ಹೇಳಿದ್ದೇನು?: ‘ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗಳನ್ನು ಸಮರ್ಥಿಸಿಕೊಂಡ ವ್ಯಕ್ತಿಯನ್ನು ಪ್ರಧಾನಿ ಮೋದಿ ನೂತನ ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಾರೆ. ಇದರ ಮೂಲಕ ದೇಶದ ಕೋಟಿಗಟ್ಟಲೆ ಸ್ತ್ರೀಯರಿಗೆ ಯಾವ ಸಂದೇಶವನ್ನು ರವಾನಿಸಿದ್ದಾರೆ? ಅವರ ಸಂದೇಶ ಸ್ಪಷ್ಟ’ ಎಂದು ಪ್ರಿಯಾಂಕಾ ವ್ಯಂಗ್ಯವಾಡಿದರು.

ಪ್ರಿಯಾಂಕಾ ತಮ್ಮ ಹೇಳಿಕೆಗೆ ಆಧಾರ ನೀಡಬೇಕೆಂದು ಜೋಶಿ ಆಗ್ರಹಿಸಿದರು. ಆಗ ಕೂಡಲೇ ಸಂಸತ್ತಿನ ಹೊರಗೆ ತೆರಳಿದ ರಾಹುಲ್ ಗಾಂಧಿ, ಪತ್ರಿಕೆಯೊಂದರ ಹಾಳೆಯನ್ನು ಪ್ರಿಯಾಂಕಾಗೆ ನೀಡಿದರು. ಅದನ್ನೇ ಸಾಕ್ಷಿಯಾಗಿ ಬಳಸಿಕೊಳ್ಳುವಂತೆ ಪ್ರಿಯಾಂಕಾ ತಿಳಿಸಿದರು.

ಪ್ರಹ್ಲಾದ್ ಜೋಶಿ ಆಕ್ರೋಶ: ಪ್ರಿಯಾಂಕಾ ಗಾಂಧಿ ಅವರು ಹಸಿ ಸುಳ್ಳುಗಳನ್ನು ಹೇಳುತ್ತಿದ್ದು, ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿ, ಕ್ಷಮೆಯಾಚನೆಗೆ ಆಗ್ರಹಿಸಿದರು.

ಬಿಜೆಪಿ ನಾಯಕರ ವಿರೋಧ: ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಇತರೆ ಬಿಜೆಪಿ ನಾಯಕರು ಪ್ರಿಯಾಂಕಾ ಹೇಳಿಕೆಗಳನ್ನು ಖಂಡಿಸಿ, ಇದು ವೈಯಕ್ತಿಕ ತೇಜೋವಧೆ ಎಂದು ಸದನದ ದಾಖಲೆಗಳಿಂದ ತೆಗೆದುಹಾಕುವಂತೆ ಪಟ್ಟು ಹಿಡಿದರು.

Related Articles

Back to top button
error: Content is protected !!