ಸಾಂಸ್ಕೃತಿಕ
ಕೆಜಿಎಫ್, ಕಾಂತಾರ ಹಿನ್ನೆಲೆ ಗಾಯಕಿ ಅನನ್ಯ ಭಟ್ ತಿರುಪತಿಯಲ್ಲಿ ಮದುವೆ: ಹುಡುಗ ಇವರೇ
Views: 105
ಕನ್ನಡ ಕರಾವಳಿ ಸುದ್ದಿ: ಕೆಜಿಎಫ್, ಕಾಂತಾರ ಕನ್ನಡ ಸಂಗೀತ ಲೋಕದ ಮಧುರ ಕಂಠದ ಹಿನ್ನೆಲೆ ಗಾಯಕಿ ಅನನ್ಯ ಭಟ್ ಹಸೆ ಮಣೆ ಏರಿದ್ದಾರೆ.
ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕ ಮತ್ತು ಪಂಡಿತರಾದ ಪಂಡಿತ್ ಡಾ. ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಈ ಮದುವೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ.
ಸೋಜುಗಾದ ಸೂಜಿ ಮಲ್ಲಿಗೆ ಹಾಡಿನಿಂದ ಜನಪ್ರಿಯರಾದ ಅನನ್ಯ ಅವರು, ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ.
ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕ ಮತ್ತು ಪಂಡಿತರಾದ ಪಂಡಿತ್ ಡಾ. ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಈ ಮದುವೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ಅನನ್ಯ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಅನನ್ಯ ಮತ್ತು ಮಂಜು ಇಬ್ಬರೂ ಸಂಗೀತದಲ್ಲಿ ಆಳವಾದ ಒಡನಾಟ ಹೊಂದಿದ್ದಾರೆ.






