ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗದ 15 ಸಂವತ್ಸರದ ಸಮಾರಂಭ ತಾ.08-06-2025ರ ಆದಿತ್ಯವಾರ ನಡೆಯಲಿದೆ.
ನೂತನ ಡಯಾಲಿಸಿಸ್ ಯಂತ್ರದ ಕೊಡುಗೆಯನ್ನು ಕೊಡುಗೈ ದಾನಿಗಳು,ಟಿಂಬರ್ ವ್ಯಾಪಾರಿ ಮಾಲಿಕರಾದ ಹಾಜಿ ಅಬ್ದುಲ್ ಖಾದರ್ ಯುಸೂಫ್ ನೀಡಲಿದ್ದಾರೆ.
ಡಾ| ಇಸ್ತಿಯಾಕ್ ಆಹ್ಮದ್, ಖ್ಯಾತ ಮೂತ್ರ ಪಿಂಡ ರೋಗ ತಜ್ಞರು ಶ್ರೀ ಶಾಂತರಾಮ್ ಪ್ರಭು, ಮಾಜಿ ರೋಟರಿ ಅಧ್ಯಕ್ಷರು (ದಕ್ಷಿಣ) ಡಾ| ಕಿಶೋರ್ ಶೆಟ್ಟಿ, ಹೃದಯ ರೋಗ ತಜ್ಞರು, ವಿನಯ ಆಸ್ಪತ್ರೆ ಕುಂದಾಪುರ ಡಾ। ಎಂ. ರಾಜಗೋಪಾಲ ಅಡಿಗ, ಅರಿವಳಿಕೆ ತಜ್ಞರು, ವಿನಯ ಆಸ್ಪತ್ರೆ ಕುಂದಾಪುರ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರು.
ಈ ಕ್ರಾರ್ಯಕ್ರಮಕ್ಕೆ ವೈದ್ಯರು, ಸಿಬ್ಬಂದಿ ವರ್ಗದವರು ಹಾಗೂ ಹಿತೈಷಿಗಳು ಶುಭ ಕೋರಿದ್ದಾರೆ.