ಕರಾವಳಿ
ಕುಂದಾಪುರ: ಮೆಕ್ಯಾನಿಕ್ ಸುಧಾಕರ್ ಆಚಾರ್ ನಿಧನ

Views: 188
ಕುಂದಾಪುರ: ಇಲ್ಲಿನ ಮೀನು ಮಾರ್ಕೆಟ್ ರಸ್ತೆಯ ಸಮೀಪದ ನಿವಾಸಿ ದಿ.ಬಾಬಾ ಆಚಾರ್ ಅವರ ಪುತ್ರ ಸುಧಾಕರ್ ಆಚಾರ್ ಅವರು ನಿಧನರಾಗಿದ್ದಾರೆ.
ಅವರಿಗೆ 63 ವರ್ಷ ವಯಸ್ಸಾಗಿತ್ತು ಕುಂದಾಪುರದಲ್ಲಿ ಮುಖ್ಯ ರಸ್ತೆಯಲ್ಲಿ ಕಾಳಿಕಾಂಬ ಇಂಜಿನಿಯರ್ ವರ್ಕ್ಸ್ ಮಾಲೀಕರಾಗಿರುವ ಅವರು ಬೈಕ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಲಕರಣೆ. ಹಾಗೂ ಜನರೇಟರ್ ರಿಪೇರಿಯಲ್ಲಿ ಪರಿಣಿತರಾಗಿದ್ದಾರೆ. ಒಂದು ವಾರದ ಹಿಂದೆ ತೀವ್ರ ಅಸ್ವಸ್ಥಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಶೇಷ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರರು, ಸಹೋದರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.