ಇತರೆ
ಕಾಡುಕೋಣ ಬೇಟೆಯಾಡಿ ಕಾರಿನಲ್ಲಿ ಮಾಂಸ ಸಾಗಾಟ: ಮೂವರು ಆರೋಪಿಗಳು ಸೇರಿ ಶಿರೂರಿನ ವ್ಯಕ್ತಿ ಬಂಧನ

Views: 202
ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಸಂಪೇಕಟ್ಟೆ- ಹೊಸೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸ ಕಾರಿನಲ್ಲಿ ಸಾಗಿಸಿದ್ದ ಮೂವರು ಆರೋಪಿಗಳು ಸೇರಿ ಶಿರೂರಿನ ವ್ಯಕ್ತಿಯನ್ನು ಸಾಗರ ಅರಣ್ಯಾಧಿ ಕಾರಿಗಳು ಬಂಧಿಸಿದ್ದಾರೆ.
ಇಬ್ಬರು ತಲೆಮರೆಸಿಕೊಂಡಿದ್ದಾರೆ.ಭಟ್ಕಳ ತಾಲೂಕಿನ ಮುಂಡಳ್ಳಿ ವಾಸಿ ಮಹಮ್ಮದ್ ಅಶ್ರಫ್, ತಾಲೂಕಿನ ಶಿರೂರು ಗ್ರಾಮದ ಹಣಬರಕೇರಿಯ ಅಲಿ ಬಾಪು ಯಾಸೀನ್, ಮದ್ದೋಡಿರೋಡ್ನ ವಾಸೀಮ್ ಬಂಧಿತರು.






