ಈ ಸಾಕ್ಷಿಗಳು ಬಲವಾದ್ದರಿಂದ ದರ್ಶನ್ ಹಾಗೂ ಟೀಂ ಕೊಲೆ ಕೇಸ್ ನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!!

Views: 188
ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಮತ್ತು ಗ್ಯಾಂಗ್ ಕೇಸಿನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇತರೆ ಆರೋಪಿಗಳು ಬಾಯಿಬಿಟ್ರು ದರ್ಶನ್ ಮಾತ್ರ ಬಾಯಿಬಿಡ್ತಿಲ್ಲವಂತೆ.
ಪೊಲೀಸರ ವಿಚಾರಣೆ ವೇಳೆ ದರ್ಶನ್ ನಾನವನಲ್ಲ.. ನನಗೇನು ಗೊತ್ತಿಲ್ಲ ಸರ್.. ಅಂತ ಹೇಳುತ್ತಿದ್ದಾರಂತೆ. ಈ ಕೇಸ್ ನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಆದರೆ ದರ್ಶನ್ ಕೊಲೆ ಕೇಸ್ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ರು ದರ್ಶನ್ ವಿರುದ್ದದ ಸಾಕ್ಷ್ಯಗಳು ಮಾತ್ರ ಬಲವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ & ಗ್ಯಾಂಗ್ ವಿರುದ್ದ ಸದ್ಯ ಸಿಕ್ಕಿರುವ ಸಾಕ್ಷಿಗಳು
ದರ್ಶನ್ ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿ ಆರು ಮಂದಿ ಟವರ್ ಡಂಪ್
ಕೊಲೆಯ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್
ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್.
ವೇಳೆ ಪೊಲೀಸರ ಅಸಲಿ ವಿಚಾರಣೆ ವೇಳೆ ಆರೋಪಿ ದೀಪಕ್ ಮೃತ ದೇಹ ಬಿಸಾಡಲಿಕ್ಕೆ ತಲಾ ಐದು ಲಕ್ಷ ನೀಡಿದ್ದಾಗಿ ಹೇಳಿಕೆ.
ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ
ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಪವಿತ್ರಾಗೌಡ ಬಗ್ಗೆ ಹೇಳಿಕೆ
ರೇಣುಕಾಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ ಅದನ್ನ ದರ್ಶನ್ ಗೆ ತಿಳಿಸಿದ್ದಾಗಿ ಪವಿತ್ರ ಹೇಳಿಕೆ
ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ಕಿಡ್ನಾಪ್ ಮಾಡಿಸಿರೋದು
ಪವನ್ ಹಾಗೂ ಪವಿತ್ರಗೌಡ ದರ್ಶನ್ ಹೇಳಿದಂತೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಹೇಳಿಕೆ
ಆರ್.ಆರ್.ನಗರದ ಶೆಡ್ ನಲ್ಲಿ ಮೃತ ರೇಣುಕಾಸ್ವಾಮಿಯ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್
ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಪಡೆದಿರೋ ಪೊಲೀಸರು
ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ರೇಣುಕಾಸ್ವಾಮಿ ಬ್ಲಡ್ ಸ್ಯಾಂಪಲ್ ಫಿಂಗರ್ ಪ್ರಿಂಟ್ ಫುಟ್ ಫ್ರಿಂಟ್ ಹಾಗೂ ಆರೋಪಿಗಳ ಫಿಂಗರ್ ಪ್ರಿಂಟ್ ಫುಟ್ ಪ್ರಿಂಟ್ ಬ್ಲಡ್ ಸ್ಯಾಂಪಲ್ ಮ್ಯಾಚ್ ಮಾಡೋ ಸಾಧ್ಯತೆ
ಕೊಲೆಯಾದ ನಂತರ ದೀಪಕ್, ವಿನಯ್, ಪವನ್ ಪದೇ ಪದೇ ದರ್ಶನ್ ಗೆ ವಾಟ್ಸಾಪ್ ಹಾಗೂ ನಾರ್ಮಲ್ ಕರೆ
ಕೊಲೆ ನಡೆದ ದಿನ ದರ್ಶನ್, ಪವಿತ್ರಾಗೌಡ ಹಾಗೂ ಆರೋಪಿಗಳು ಮೊಬೈಲ್ ಸಿಡಿಆರ್ ಟವರ್ ಡಂಪ್ ಒಂದೇ ಲೊಕೇಷನ್ ನಲ್ಲಿ ಪತ್ತೆ
ಸದ್ಯ ಇವಿಷ್ಟು ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿದೆ. ಹೀಗಿರುವಾಗ ದರ್ಶನ್ ಹಾಗೂ ಟೀಂ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಪ್ಪಿಸಿಕೊಳ್ಳಲು ಮೇಲ್ನೋಟಕ್ಕೆ ಸಾಧ್ಯವಿಲ್ಲ. ಮಾತ್ರವಲ್ಲದೆ ದರ್ಶನ್, ಪವಿತ್ರ ಗೌಡ, ಹಾಗೂ ಸಹಚರರು ಜೈಲು ಸೇರೋದು ಗ್ಯಾರಂಟಿ ಎಂಬ ಲೆಕ್ಕಚಾರ ಎದ್ದು ಕಾಣುತ್ತಿದೆ. ಪೊಲೀಸರು ಕೂಡ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.






