ಇತರೆ

ಆಲೂರು:ವಿವಿಧ ಮಸಾಲಾ ಪದಾರ್ಥಗಳ ತಯಾರಿಕಾ ತರಬೇತಿಯ ಸಮಾರೋಪ ಸಮಾರಂಭ 

Views: 56

ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಗ್ರಾಮ ಪಂಚಾಯತ್ ಆಲೂರು ಸಂಜೀವಿನಿ ಒಕ್ಕೂಟ ಇವರ ಆಯೋಜನೆಯಲ್ಲಿ ವಿಶ್ವಕರ್ಮ ಸಭಾಂಗಣ ಕಾಳಿಕಾಂಬಾ ನಗರ ಆಲೂರಿನಲ್ಲಿ 6 ದಿನಗಳ *ವಿವಿಧ ಮಸಾಲಾ ಪದಾರ್ಥಗಳ ತರಬೇತಿಯ* ಸಮಾರೋಪ ಸಮಾರಂಭ ವಿಶ್ವಕರ್ಮ ಸಮುದಾಯ ಭವನ ಕಾಳಿಕಾಂಬಾನಗರ ಆಲೂರಿನಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಶುಭಹಾರೈಸಿದರು. ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೇಶ್ ದೇವಾಡಿಗ,ತರಬೇತುದಾರೆ ಹೇಮಾ ಜಗನ್ನಾಥ,ಬಿವಿಟಿಯ ರಾಘವೇಂದ್ರ ಆಚಾರ್ಯ, ವಿಶ್ವಕರ್ಮ ಸಮುದಾಯ ಭವನದ ಕಾರ್ಯದರ್ಶಿ ಉಮೇಶ್ ಆಚಾರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನುಸೂಯ,ಆಸನ ಮತ್ತು ಧ್ವನಿ ವರ್ಧಕ ವ್ಯವಸ್ಥೆಗೆ ಸಹಕಾರ ನೀಡಿದ ಸಂದೀಪ್ ಆಚಾರ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ದಿವ್ಯಾ,ವೀಣಾ, ಶರಾವತಿ, ಪ್ರೀತಿ, ಪ್ರಾರ್ಥಿಸಿ,ವೀಣಾ ಆಚಾರ್ಯ ಸ್ವಾಗತಿಸಿ, ಚೈತ್ರ ಆಚಾರ್ಯ ವಂದಿಸಿ, ಪೂರ್ಣಿಮಾ ನಿರೂಪಿಸಿದರು. ಒಟ್ಟು 38 ಜನ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ವಿಜಯ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಎಂಬಿಕೆ, ಎಲ್ ಸಿ ಆರ್ ಪಿ ಸಹಕರಿಸಿದರು.

Related Articles

Back to top button