ಸಾಸ್ತಾನ ಚೆಲ್ಲಮಕ್ಕಿ ನಾಗಬನ ವರ್ಧಂತ್ಯುತ್ಸವದ ಪ್ರಯುಕ್ತ ಕೋಟ ಪಂಚವರ್ಣದ 194ನೇ ವಾರದ ಸ್ವಚ್ಛತಾ ಅಭಿಯಾನ

Views: 62
ಉಡುಪಿ: ಸಾಸ್ತಾನದ ಗುಂಡ್ಮಿ ಚೆಲ್ಲಮಕ್ಕಿ ನಾಗ ದೇವಸ್ಥಾನ ಇದರ 15ನೇ ವರ್ಧಂತ್ಯುತ್ಸವ ಪ್ರಯುಕ್ತ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತ್ರತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಡಿ194ನೇ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮಕ್ಕೆ ಶಿಕ್ಷಣತಜ್ಞ ಗಣೇಶ್ ಜಿ ಚಲ್ಲಮಕ್ಕಿ ಚಾಲನೆ ನೀಡಿ ಮಾತನಾಡಿ, ‘ಸಮಾಜ ಸೇವೆಯ ಧ್ಯೇಯ ಅರಿತು ಅದನ್ನು ಸಮಾಜಕ್ಕೆ ನೈಜವಾಗಿ ಅರ್ಪಿಸಿಕೊಳ್ಳಬೇಕು ಆಗಮಾತ್ರ ಅದರ ಮಹತ್ವ ಹೆಚ್ಚಿಸುತ್ತದೆ’
ನಿಸ್ವಾರ್ಥ ಸೇವೆಯನ್ನು ತನ್ನ ಸಂಘದ ತಳಹದಿಯಾಗಿ ಇರಿಸಿಕೊಂಡು ಸತತ 25 ವರ್ಷಗಳಿಂದ ಕನ್ನಡಪರ,ಸಾಮಾಜಿಕ ಕಾರ್ಯಕ್ರಮಗಳ ನಡುವೆ ಪರಿಸರಸ್ನೇಹಿ ಕಾರ್ಯಕ್ರಮಗಳಿಂದ ರಸ್ತೆ,ದೇವಳಗಳ ಸ್ವಚ್ಛತಾ ಕಾರ್ಯ ,ಗಿಡನೆಟ್ಟು ಪೋಷಿಸುವ ಕಾರ್ಯಗಳನ್ನು ಹಮ್ಮಿಕೊಂಡ ಪಂಚವರ್ಣದ ಸಾಮಾಜಿಕ ಬದ್ಧತೆಯನ್ನು ಸಮಾಜದ ಮುಂದೆ ತೆರೆದಿಟ್ಡರು.
ಸಂಘಸಂಸ್ಥೆಗಳು ಹೆಸರಿಗಾಗಿ ಉಳಿಯದೆ ನಿತ್ಯನಿರಂತರ ಸಾಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಒಂದಿಷ್ಟು ಜನರಿಗೆ ಪರೋಪಕಾರದ ಬೀಜ ಬಿತ್ತುವ ಕಾರ್ಯಗಳಾಗಲಿ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದ್ದರು.
ದೇಗುಲದ ಆಡಳಿತ ಮಂಡಳಿಯ ಪ್ರಮುಖರಾದ ದಿನಕರ್ ವಿ. ರಾವ್,ರಾಘವೇಂದ್ರ ಸರ್ವೇಗಾರ್ ,ವಿವೇಕ ಗುಂಡ್ಮಿ,ವಿಘ್ನೇಶ ಗಣೇಶ್,ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಪೂಜಾರಿ,ಕಾರ್ಯದರ್ಶಿ ವಸಂತಿ ಹಂದಟ್ಟು,ಜತೆಕಾರ್ಯದರ್ಶಿ ಶಕೀಲ ಎನ್ ಪೂಜಾರಿ,ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.