ಸಾಮಾಜಿಕ

ವಿಚ್ಛೇದಿತ ಮಹಿಳೆಗೆ ಹೊಸ ಜೀವನ ಕೊಡುತ್ತೇನೆ ಎಂದು ನಂಬಿಸಿ ವಂಚನೆ:ಆರೋಪಿ ಬಂಧನ

Views: 119

ಕನ್ನಡ ಕರಾವಳಿ ಸುದ್ದಿ: ಡಿವೋರ್ಸಿ, ಮ್ಯಾಟ್ರಿಮೋನಿಯಲ್ಲಿ ಸಿಗುವ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ ವಿಚ್ಛೇದಿತ ಮಹಿಳೆಯೊಬ್ಬರಿಗೆ ಮ್ಯಾಟ್ರಿಮೋನಿಯಲ್ಲಿ ನಿಮ್ಮನ್ನು ಮದುವೆಯಾಗುತ್ತೇನೆ, ಹೊಸ ಜೀವನ ಕೊಡುತ್ತೇನೆ ಎಂದು ನಂಬಿಸಿ ಅವರಿಂದ 2.80 ಲಕ್ಷ ಹಣ ಪಡೆದು ವಂಚಿಸಿರುತ್ತಾನೆ. ಈ ಬಗ್ಗೆ ಮಹಿಳೆ ಠಾಣೆಗೆ ಬಂದು ಮದುವೆಯೂ ಆಗದೇ ಮೋಸ ಮಾಡಿದ್ದಾರೆ ಎಂದು ಸುರೇಶ್ ನಾಯ್ಡು ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.

ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸಿಬ್ಬಂದಿ ಈತನನ್ನು ಮಹದೇವಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಇವರ ಮೊಬೈಲ್ ಪರಿಶೀಲಿಸಿದ್ದಾರೆ. ಇವನು ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ಎರಡನೇ ಮದುವೆಯಾಗಿ ಮಹದೇವಪುರದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಈತ ವಿಚ್ಛೇದಿತ ಮಹಿಳೆಯರು, ಒಂಟಿ ಮಹಿಳೆಯರನ್ನು ನಂಬುವಂತೆ ಮಾಡುತ್ತಿದ್ದ. ನಾನು ನಿಮ್ಮನ್ನು ಮದುವೆಯಾಗುತ್ತೇನೆ, ಒಳ್ಳೆ ಮನೆ ಕಟ್ಟೋಣ, ನಾನು ಬಿಸಿನೆಸ್ ಮಾಡುತ್ತಿದ್ದೇನೆ, ನನ್ನ ಬಳಿ ಇಷ್ಟು ದೊಡ್ಡ ಮನೆ ಇದೆ ಎಂದು ಹೇಳಿ ವಿಡಿಯೋ ಕಾಲ್ ಮೂಲಕ ಯಾವುದ್ಯಾವುದೋ ಮನೆ, ಹೋಟೆಲ್ ತೋರಿಸಿಕೊಂಡು ಅವರಿಗೆ ಮೋಸ ಮಾಡುತ್ತಿದ್ದ ಎಂದು ಡಿವೈಎಸ್ಪಿ ಎಂದು ರವಿಕುಮಾರ್ ಹೇಳಿದ್ದಾರೆ.

ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು, ಅವರೊಂದಿಗೆ ಸಂವಹನ ಮಾಡಿ, ಅವರ ನಂಬಿಕೆ ಗಳಿಸಿದ ಮೇಲೆ ಇದ್ದಕ್ಕಿದ್ದಂತೆ ಕರೆ ಮಾಡಿ, ನಾನು ಆಸ್ಪತ್ರೆಯಲ್ಲಿದ್ದೇನೆ ನನಗೆ ಅರ್ಜೆಂಟ್ ಆಗಿ ಹಣ ಬೇಕು ಎಂದು ಅಥವಾ ಸೈಟ್ ತೆಗೆದುಕೊಳ್ಳುತ್ತಿದ್ದೇನೆ ಎಂದು ನಂಬಿಸಿ ಹಣವನ್ನು ಅವರಿಂದ ಹಾಕಿಸಿಕೊಳ್ಳುತ್ತಿದ್ದ. ಇದು ಒಬ್ಬಿಬ್ಬರಿಗಷ್ಟೇ ಅಲ್ಲ ಬಹಳ ಜನರಿಗೆ ಈ ರೀತಿ ಮೋಸ ಮಾಡಿದ್ದಾನೆ.

ಮಲೇಶಿಯಾದಲ್ಲಿದ್ದ ಒಬ್ಬ ಮಹಿಳೆಗೆ ಲಕ್ಷ ರೂ. ಮೋಸ ಮಾಡಿದ್ದಾನೆ. ಯಶವಂತಪುರದಲ್ಲಿ ಒಬ್ಬರಿಗೆ ಇದೇ ರೀತಿಯಲ್ಲಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

 

Related Articles

Back to top button