ಲೋಕಸಭಾ ಟಿಕೆಟ್ಗಾಗಿ ಹೈಕಮಾಂಡ್ಗೆ ಕಂಡೀಷನ್ಸ್ ‘ಕೈ’ ಕೊಟ್ಟು ಬಂದ್ರಾ ಶೆಟ್ಟರ್?

Views: 74
ಬೆಂಗಳೂರು: ಧಾರವಾಡ ಲೋಕಸಭಾ ಮೇಲೆ ಕಣ್ಣಿಟ್ಟಿರುವ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಬರುವ ಮುನ್ನವೇ ಟಿಕೆಟ್ ಖಾತ್ರಿ ಪಡಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶೆಟ್ಟರ್ ಸಹ ಸುಳಿವು ನೀಡಿದ್ದಾರೆ.
ಶೆಟ್ಟರ್ ರಿಟರ್ನ್ ಹಿಂದೆ ಕಂಡೀಷನ್ ಅಪ್ಲೈ ಇರುವಂತೆ ಕಾಣ್ತಿದೆ. ಕಾಂಗ್ರೆಸ್ಗೆ ಗುಡ್ಬೈ ಹೇಳಿ ಬಿಜೆಪಿ ಸೇರ್ಪಡೆಗೆ ಲೋಕಸಭೆ ಟಿಕೆಟ್ ವದಂತಿಯೊಂದು ದಟ್ಟವಾಗಿ ಹರಿದಾಡ್ತಿದೆ. ವಿಧಾನಸಭೆಗೆ ಸಿಗದ ಟಿಕೆಟ್, ಲೋಕಸಭೆಯಲ್ಲಿ ಗಿಟ್ಟಿಸಲೇಬೇಕು ಎಂಬ ಹಠಕ್ಕೆ ಶೆಟ್ಟರ್ ಬಿದ್ದಿದ್ದಾರೆ.
ಜಗದೀಶ್ ಶೆಟ್ಟರ್, ರಾಷ್ಟ್ರ ರಾಜಕಾರಣಕ್ಕೆ ತೆರಳಲು ಸಜ್ಜಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆಗೆ ಸಿದ್ಧ ಅಂತ ಹಿಂಟ್ ಬಿಟ್ಟುಕೊಟ್ಟಿದ್ದಾರೆ. ಅಚ್ಚರಿ ಎಂದ್ರೆ ಟಿಕೆಟ್ ಕೊಡೊದಾದ್ರೆ ಧಾರವಾಡ ಕ್ಷೇತ್ರದಿಂದ ಮಾತ್ರ ನೀಡಿ ಅಂತ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಮರಳುವ ವೇಳೆ ಇಟ್ಟಿರುವ ಈ ಹೊಸ ಬೇಡಿಕೆ ವರಿಷ್ಠರಿಗೂ ಇಕ್ಕಟ್ಟಿಗೆ ಸಿಲುಕಿಸಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬೇಕು ಎಂದು ಬೇಡಿಕೆ ಮಂಡಿಸಿರುವ ಶೆಟ್ಟರ್, ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಬೇರೆಡೆ ಕಣಕ್ಕಿಳಿಸಿ ಎಂಬ ಮಾತು ಆಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಶೆಟ್ಟರ್ ಕಾರಣವೊಂದನ್ನ ನೀಡಿದ್ದು, ಹಾಲಿ ಸಂಸದ ಪ್ರಲ್ಹಾದ್ ಜೋಶಿ, ರಾಜ್ಯದ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಂಡಿದ್ದಾರೆ. ಈ ಬಾರಿ ಧಾರವಾಡದಿಂದ ಸ್ಪರ್ಧೆ ಮಾಡಿದ್ರೆ, ಪ್ರಬಲ ಸಮುದಾಯ ಅವರ ಕೈ ಹಿಡಿಯುವುದಿಲ್ಲ ಎಂಬ ಚರ್ಚೆ, ಕ್ಷೇತ್ರದಲ್ಲಿದೆ ಅಂತ ಹೈಕಮಾಂಡ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಮಾತಿಗೆ ಇನ್ನೊಮ್ಮೆ ಚರ್ಚಿಸೋಣ ಅಂತ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭಾ ಕ್ಷೇತ್ರದ ಟಿಕೆಟ್ ಸಂಬಂಧ ಬಿಜೆಪಿಯಲ್ಲೇ ಪರ-ವಿರೋಧ ಶುರು ಆಗಿದೆ. ಜೋಶಿ ಪರ ಶಾಸಕ ಅರವಿಂದ್ ಬೆಲ್ಲದ್ ಮತ್ತು ಮಹೇಶ್ ಟೆಂಗಿನಕಾಯಿ ಬ್ಯಾಟ್ ಬೀಸಿದ್ರೆ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಹೈಕಮಾಂಡ್ ನಿರ್ಧಾರ ಅಂತಿಮ ಎಂದಿದ್ದಾರೆ.
ಇನ್ನು, ಜೋಶಿ ಸಹ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ವಿವಿಧ ಕಾರ್ಯಕ್ರಮ ಆಯೋಜಿಸಿ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜೋಶಿ, ಎಲೆಕ್ಷನ್ಗೆ ತಯಾರಿ ನಡೆಸಿದ್ದೇನೆ ಅಂತ ಊಹಾಪೋಹಗಳಿಗೆ ಕೌಂಟರ್ ಕೊಟ್ಟಿದ್ದಾರೆ.
ಇತ್ತ, ಕಾಂಗ್ರೆಸ್ ಮಾತ್ರ ಪಕ್ಷ ತೊರೆದು ಹೋದ ಶೆಟ್ಟರ್ ಸೋಲಿಸಲು ಪಣತೊಟ್ಟಿದೆ. ಶೆಟ್ಟರ್ ಎಲ್ಲೇ ಸ್ಪರ್ಧಿಸಲಿ, ಅಲ್ಲಿ ತಕ್ಕ ಪಾಠ ಕಲಿಸೋದಾಗಿ ಶಪಥ ಮಾಡಿದೆ. ಒಟ್ಟಾರೆ, ಶೆಟ್ಟರ್ – ಜೋಶಿ ಕಳೆದ ಮೂರುವರೆ ದಶಕಗಳಿಂದಲೂ ಜೊತೆಯಾಗೇ ರಾಜಕಾರಣ ಮಾಡಿದವ್ರು. ಈಗ ವಿಧಾನಸಭೆ ಟಿಕೆಟ್ ವಿಚಾರದಲ್ಲಿ ಹೊತ್ತಿದ ಬೆಂಕಿ ಲೋಕಸಭೆಗೂ ವ್ಯಾಪಿಸಿದಂತೆ ಕಾಣಿಸ್ತಿದೆ. ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಜೋಷಿಗೆ ತಪ್ಪಿಸಿ ನಿಜಕ್ಕೂ ಶೆಟ್ಟರ್ಗೆ ಟಿಕೆಟ್ ಕೊಡ್ತಾರಾ ಅನ್ನೋದು ಯಕ್ಷ ಪ್ರಶ್ನೆ.