ಬೈಂದೂರು ಮೂರು ಪ್ರತ್ಯೇಕ ಪ್ರಕರಣ: ಸಹಾಯ ಮಾಡುವ ನೆಪದಲ್ಲಿ ಎಟಿಎಂನಿಂದ ಲಕ್ಷಾಂತರ ಹಣ ಎಗರಿಸಿದ ಕಳ್ಳರು

Views: 72
ಬೈಂದೂರು: ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಹರಿಯಾಣ ಮೂಲದ ಇಬ್ಬರು ಕಳ್ಳರನ್ನು ಬೈಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಲ್ಕೀಸ್ ಬಾನು ಚೈತ್ರ ಮತ್ತು ಚಂದ್ರಶೇಖರ್ ಹಣ ಕಳೆದುಕೊಂಡ ಗ್ರಾಹಕರು.
ಹರಿಯಾಣ ಮೂಲದ ಸಂದೀಪ್ ಹಾಗೂ ರವಿ ಗ್ರಾಹಕರಿಗೆ ವಂಚಿಸಿದ ಬಂಧಿತ ಆರೋಪಿಗಳು.
ಮೊದಲ ಪ್ರಕರಣದಲ್ಲಿ ಬಲ್ಕೀಸ್ ಬಾನು ಅವರು ಎಟಿಎಂ ಕಾರ್ಡ್ ನಿಂದ ಹಣ ತೆಗೆಯಲು ಶಿರೂರು ಅರ್ಬನ್ ಬ್ಯಾಂಕಿನ ಎಟಿಎಂಗೆ ಹೋಗಿದ್ದ ವೇಳೆ ಇಬ್ಬರು ಒಳಗಿದ್ದರು ಅವರನ್ನು ಹೊರಗಡೆ ಬರುವಂತೆ ತಿಳಿಸಿದಾಗ ಹೊರಗೆ ಬಂದಿದ್ದು ಕಾರ್ಡ್ ಹಾಕಿದಾಗ ಹಣ ಬಾರದೆ ಇದ್ದುದ್ದನ್ನು ಗಮನಿಸಿ ಒಬ್ಬ ವ್ಯಕ್ತಿ ಒಳಗೆ ಬಂದು ಕಾರ್ಡ್ ಹಾಗೆ ಹಾಕುವುದು ಅಲ್ಲವೆಂದು ಹೇಳಿ ಪಡೆದು ಹೀಗೆ ಹಾಕಬೇಕೆಂದು ತಿಳಿಸಿದರು ಹಣ ಬಾರದ ಕಾರಣ ಬಲ್ಕಿಸ್ ಬಾನು ಅವರಿಗೆ ಮರಳಿ ನೀಡಿ ಹೊರಗೆ ಹೋದ ಬಲ್ಕಿಸ್ ಬಾನು ಆ ಬಳಿಕ ಕರ್ನಾಟಕ ಬ್ಯಾಂಕ್ ಎಟಿಎಂ ಗೆ ಹೋಗಿ ಹಣ ಡ್ರಾ ಮಾಡಲು ಹೋದಾಗ ಕಾರ್ಡ್ ಬದಲಾಗಿಸಿರುವುದು ತಿಳಿದು ಬಂದಿದೆ.
ತತ್ ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಿಂದ 5 ಸಾವಿರ ರೂಪಾಯಿ ತೆಗೆದಿರುವುದು ಕಂಡುಬಂದಿದೆ. ಸಹಾಯಮಾಡಿದ ವ್ಯಕ್ತಿ ಇನ್ನೊಂದು ಏಟಿಎಂನಿಂದ ಹಣ ಪಡೆದು ಹೋಗಿದ್ದ ಎಂದು ತಿಳಿದು ಬಂದಿದೆ.
ಎರಡನೇ ಪ್ರಕರಣದಲ್ಲಿ ಚೈತ್ರ ಅವರು ಶಿರೂರು ಮಾರ್ಕೆಟ್ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ಗೆ ಹಣ ತರಲು ಹೋಗಿದ್ದಾಗ ಒಳಗಡೆ ಗ್ರಾಹಕರ ಸೊಗಿನಲ್ಲಿ ಇಬ್ಬರು ವ್ಯಕ್ತಿಗಳು ಇದೇ ರೀತಿಯಾಗಿ ಉಪಾಯ ಮಾಡಿ ಅವರನ್ನು ವಂಚಿಸಿ, ಕಾರ್ಡ್ ಬದಲಾಯಿಸಿ 21 ಸಾವಿರ ಹಣ ಎಗರಿಸಿದ್ದಾರೆ.
ಮೂರನೇ ಪ್ರಕರಣದಲ್ಲಿ ಚಂದ್ರಶೇಖರ್ ಅವರು ಬೈಂದೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಗೆ ಹಣ ತರಲು ಹೋಗಿದ್ದಾಗ ಒಳಗಡೆ ಇದ್ದ ಇಬ್ಬರು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ 2 ಲಕ್ಷ ರೂಪಾಯಿ ಎಗರಿಸಿದ್ದಾರೆ.
ಈ ಮೂರು ಪ್ರಕರಣದಲ್ಲಿ ಗ್ರಾಹಕರನ್ನು ವಂಚಿಸಿ ಹಣ ಎಗರಿಸಿದ ಕುರಿತು ಪ್ರತ್ಯೇಕ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.