ಜನಮನ

ಗ್ರಂಥಾಲಯ ಮೇಲ್ವಿಚಾರಕರಿಗೆ  ‘ಮಕ್ಕಳ ಸ್ನೇಹಿ ಗ್ರಂಥಾಲಯ’  ತರಬೇತಿ ಕಾರ್ಯಕ್ರಮ 

Views: 0

  ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರಿಗೆ ಮೂರು ದಿನಗಳ ಕಾಲ  “ಮಕ್ಕಳ ಸ್ನೇಹಿ ಗ್ರಂಥಾಲಯ” ವಿಷಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು 

ಜುಲೈ 17,18,19 ರ ವರೆಗೆ  ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,.   ಜುಲೈ 17 ರಂದು ಪ್ರಥಮ ದಿನ  ತರಬೇತಿ ಕಾರ್ಯಕ್ರಮವನ್ನು  ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ  ಅಧಿಕಾರಿ ಶ್ರೀಮತಿ ಭಾರತಿ ಅವರು  ಉದ್ಘಾಟಿಸಿದರು. 

  ನಂತರ ಅವರು ಮಾತನಾಡಿ,.ಗ್ರಂಥಾಲಯವು ಮಕ್ಕಳಿಗೆ ಹೆಚ್ಚು ಉಪಯೋಗವಾಗುವ  ವಿಷಯವಾಗಿದ್ದರಿಂದ  ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡಿಸಿಕೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ  ಮಾದರಿ ಗ್ರಂಥಾಲಯ ಮಾಡುವಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಆಗಬೇಕು.ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.

             ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮ್ಯಾನೇಜರ್ ರಾಮಚಂದ್ರ ಮಯ್ಯ, ಡಿ.ಟಿ.ಸಿ ಅಧಿಕಾರಿ  ಬಿ.ಮೋಹನ್ ಚಂದ್ರ ಕಾಳಾವರ್ಕರ್, ಶ್ರೀಮತಿ ಭಾರತಿ,  ಶ್ರೀಮತಿ ಅನಿತಾ, ಕುಂದಾಪುರ ತಾಲೂಕು ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಶ್ಯಾಮಲಾ, ಈ ಸಂದರ್ಭದಲ್ಲಿ ಹಿರಿಯ ಗ್ರಂಥಾಲಯ ಮೇಲ್ವಿಚಾರಕ ಪ್ರತಿನಿಧಿಗಳು ಉಪಸ್ಥಿತರಿದ್ದರು,

ತರಬೇತಿ ಕಾರ್ಯಕ್ರಮದಲ್ಲಿ   ಒಟ್ಟು 49 ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.  

ಬಿ.ಮೋಹನ್ ಚಂದ್ರ ಕಾಳಾವರ್ಕರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button