ಜನಮನ

“ಗಾರೆ ಬಾಬಣ್ಣ”ನ ಬದುಕು ಮತ್ತೆ ಬಣ್ಣವಾಗಿಸಲು ನೆರವು ನೀಡಿ…

Views: 226

ಕುಂದಾಪುರ: ಶಂಕರನಾರಾಯಣ ಗ್ರಾಮದ ತಲಾರಿ ನಿವಾಸಿ ಲಕ್ಷ್ಮಣ ದೇವಾಡಿಗ ಯಾನೆ ಬಾಬು ದೇವಾಡಿಗ ಇವರು ಜೀವನ ನಿರ್ವಹಣೆಗೆ ಗಾರೆ ಕೆಲಸ ಮಾಡಿಕೊಂಡಿದ್ದು, ಮೂರು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ವೈದ್ಯರು ಪರೀಕ್ಷಿಸಿದಾಗ ಅವರು ಅತೀ ಅಪರೂಪದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ (ಮೇದೋಜೀರಕ ಗ್ರಂಥಿಯ ಕ್ಯಾನ್ಸರ್) ನಿಂದ ಬಳಸುತ್ತಿರುವುದು ಕಂಡುಬಂದಿದ್ದು, ವೈದ್ಯರು ಪೂರ್ಣ ಚಿಕಿತ್ಸೆಗೆ 10 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ಆಪರೇಷನ್ ಗೆ 5 ಲಕ್ಷಕ್ಕೂ ಅಧಿಕ ಖರ್ಚಾಗಿದ್ದು, ಸದ್ಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ಕೀಮೋ ಥೆರಪಿ ಮತ್ತು ಇತರ ವೈದ್ಯಕೀಯ ಚಿಕಿತ್ಸೆಗೆ ಇನ್ನೂ5 ಲಕ್ಷ ಹಣ ಆಗತ್ಯವಿದೆ.

ಬಾಬು ದೇವಾಡಿಗ ಅವರು ಆರ್ಥಿಕವಾಗಿ ಬಡವರಾಗಿದ್ದು, ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದಾರೆ. ಈಗ ಬರಸಿಡಿಲಿನಂತೆ ಬಂದಿರುವ ಸಮಸ್ಯೆಯಿಂದ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ಸಹೃದಯಿಗಳಾದ ತಾವು ತಮ್ಮ ಕೈಲಾದಷ್ಟು ಮಾನವೀಯ ನೆರವು ನೀಡಿ… ನೆರವಿನ ನಿರೀಕ್ಷೆಯಲ್ಲಿರುವ ಅವರ ಬದುಕಿಗೆ ಆಸರೆಯಾಗಬೇಕಾಗಿ ಕೇಳಿಕೊಂಡಿದ್ದಾರೆ.

Related Articles

Back to top button