ಉಡುಪಿ ಭೀಕರ ಅಪಘಾತ:ರಸ್ತೆ ದಾಟುತ್ತಿದ್ದ ಮಹಿಳೆ ಬಸ್ನ ಚಕ್ರದಡಿಗೆ ಸಿಲುಕಿ ಸಾವು

Views: 217
ಕನ್ನಡ ಕರಾವಳಿ ಸುದ್ದಿ:ರಸ್ತೆ ದಾಟುತ್ತಿದ್ದ ಮಹಿಳೆ ಬಸ್ನ ಚಕ್ರದಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಈಶ್ವರನಗದಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಉಪ್ಪೂರಿನ ನಿವಾಸಿ ವಿನೋದಾ ಶೇರ್ವೆಗಾರ (59) ಮೃತಪಟ್ಟವರು. ಪತಿ ಮತ್ತು ಪುತ್ರಿಯನ್ನು ಅವರು ಆಗಲಿದ್ದಾರೆ.
ಇಬ್ಬರು ಮಕ್ಕಳನ್ನು ಬ್ರಹ್ಮಾವರದ ಖಾಸಗಿ ಶಾಲೆಗೆ ಕರೆದುಕೊಂಡು ಹೋಗಿ ಸಂಜೆ ವಾಪಸ್ ಮನೆಗೆ ಬಿಟ್ಟು ಉಪ್ಪೂರಿನ ಮನೆಗೆ ವಾಪಸಾಗುತ್ತಿದ್ದರು. ಎಂದಿನಂತೆ ಬುಧವಾರ ಸಂಜೆ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬಂದು ಬಿಟ್ಟು ಉಪ್ಪೂರಿಗೆ ಹೊರಟಿದ್ದರು. ರಸ್ತೆ ದಾಟುತ್ತಿದ್ದ ವಿನೋದಾ ಅವರಿಗೆ ರಿಕ್ಷಾ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದರು. ರಿಕ್ಷಾದ ಹಿಂದಿನಿಂದ ರಸ್ತೆಯ ಬಲಬದಿಯಲ್ಲಿ ಅತೀ ವೇಗದಲ್ಲಿ ಆಗಮಿಸಿದ ಖಾಸಗಿ ಎಕ್ಸ್ಪ್ರೆಸ್ನ ಚಕ್ರದ ಅಡಿಗೆ ಸಿಲುಕಿದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ವಿನೋದಾ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಣಿಪಾಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.