ಜನಮನ
ಇಂದು ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ: ಕುಂದಾಪುರ ವಿವಿಧೆಡೆ ವಿದ್ಯುತ್ ವ್ಯತ್ಯಯ

Views: 122
ಕನ್ನಡ ಕರಾವಳಿ ಸುದ್ದಿ: ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಎ. 23ರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕುಂದಾಪುರ ಪುರಸಭೆ ವ್ಯಾಪ್ತಿ, ಟಿ.ಟಿ.ರೋಡ್, ಬಿ.ಸಿ.ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ ಜಪ್ತಿ ವಾಟರ್ ಸಪ್ಲೆ, ಅಂಪಾರು, ಹಳ್ಳಾಡು, ಕಾವ್ರಾಡಿ, ಶಂಕರನಾರಾಯಣ, ಕೊರ್ಗಿ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಕೋಣಿ, ಕಂದಾವರ, ಬಸ್ರೂರು, ಬಳ್ಳೂರು, ಆನಗಳ್ಳಿ ಕೋಡಿ, ಎಂ.ಕೋಡಿ, ಅಂಕದಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.