ಜನಮನ

ಅಜ್ಜನ ಪ್ರಾಣ ಉಳಿಸಲು ಆ್ಯಂಬುಲೆನ್ಸ್​ಗೆ ಕಾಯಲು ಸಮಯವಿಲ್ಲದೇ ಎಮರ್ಜೆನ್ಸಿ ವಾರ್ಡ್​ಗೆ ಬೈಕ್​ ನುಗ್ಗಿಸಿದ ಮೊಮ್ಮಗ !

Views: 116

ಆಸ್ಪತ್ರೆಯ ಒಳಗಿರುವ ಎಮರ್ಜೆನ್ಸಿ ವಾರ್ಡ್​ಗೆ ನೇರವಾಗಿ ಅನಾರೋಗ್ಯದಿಂದ ಬಳಲುತ್ತಿರೋ ತನ್ನ ಅಜ್ಜನನ್ನ ಬೈಕ್​ನಲ್ಲಿ ಕರೆದುಕೊಂಡು ಬಂದು ಯುವಕನೊಬ್ಬ ದಾಖಲು ಮಾಡಿದ್ದಾನೆ. ಈ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನ ಸತ್ನಾದಲ್ಲಿರೋ ಸರ್ದಾರ್ ವಲ್ಲಭ ಭಾಯ್ ಪಟೇಲ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಭೋಪಾಲ್​ನ ತಿಕುರಿಯಾ ತೊಲಾ ನಿವಾಸಿ ದೀಪಕ್ ಗುಪ್ತಾ ಎಂಬ ವ್ಯಕ್ತಿಯ ಅಜ್ಜನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಅಜ್ಜನನ್ನು ಬೈಕ್​ನಲ್ಲಿ ಕೂರಿಸಿಕೊಂಡು ಮೊಮ್ಮಗ ನೇರವಾಗಿ ಆಸ್ಪತ್ರೆಯ ಒಳಗಿನ ಎಮರ್ಜೆನ್ಸಿ ವಾರ್ಡ್​ಗೆ ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ.

ಆ್ಯಂಬುಲೆನ್ಸ್​ಗೆ ಕಾಯುವುದಕ್ಕೆ ಸಮಯವಿಲ್ಲದ ಕಾರಣ ಅಜ್ಜನನ್ನು ಥೇಟ್​ ತ್ರಿ ಈಡಿಯೆಟ್ಸ್ ಸಿನಿಮಾ ದೃಶ್ಯದಂತೆ ಬೈಕ್‌ನಲ್ಲೇ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾನೆ.

Related Articles

Back to top button