ಕರಾವಳಿ

ಕುಂದಾಪುರ ಮೂಡ್ಲಕಟ್ಟೆ ಯಲ್ಲಿ ರೈಲ್ವೆ ನೌಕರರ ಸಾವು :ಕೊಂಕಣ ರೈಲ್ವೆ ಅಧಿಕಾರಿಗಳ ವಿರುದ್ಧ ದೂರು 

Views: 280

ಕನ್ನಡ ಕರಾವಳಿ ಸುದ್ದಿ:ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮೂಡ್ಲಕಟ್ಟೆ ಎಂಬಲ್ಲಿ ಟ್ರ್ಯಾಕ್ ಮ್ಯಾನ್ ಆಗಿ ಕೊಂಕಣ ರೈಲ್ವೆಯಲ್ಲಿ ಕೆಲಸ ಮಾಡತ್ತಿರುವ ನೌಕರೊಬ್ಬರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಇಲಾಖೆ ಹಿರಿಯ ಅಧಿಕಾರಿಗಳ‌ ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತರ ಪತ್ನಿ ನಾಗಶ್ರೀ ತನ್ನ ಪತಿಯ ಸಾವಿಗೆ ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿ, ಎಸ್.ಎಸ್.ಇ. ವೀರೇಶ್ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ ಮತ್ತು ಕಾಂಟ್ರಾಕ್ಟರ್‌ ರೋನಾಲ್ಡ್‌ ಸಿಕ್ವೇರಾ ಮತ್ತು ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳು ಕರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಪಿರ್ಯಾದಿದಾರರಾದ ನಾಗಶ್ರೀ (41), ಉಪ್ಪುಂದ ಗ್ರಾಮ, ಬೈಂದೂರು ಇವರ ಗಂಡ ಮೃತ ಆನಂದ (43) ಇವರು ಎಂಪ್ಲಾಯಿ ನಂಬರ್ 6793 ರಂತೆ ಕೊಂಕಣ್ ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 31/03/2025 ರಂದು ಕರ್ತವ್ಯಕ್ಕೆ ಹೋಗಿದ್ದವರು ಕೊಂಕಣ ರೈಲ್ವೆ ಇಲಾಖೆಯ ಎಸ್ ಎಸ್ ಇ ವೀರೇಶರವರ ಆದೇಶದಂತೆ, ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂಬಲ್ಲಿಗೆ, ಟ್ರ್ಯಾಕ್ ಮ್ಯಾನ್ ಕರ್ತವ್ಯ ಮಾಡಿಕೊಂಡಿದ್ದವರನ್ನು ಹೈಟ್‌ ಗೇಜ್‌ ಕರ್ತವ್ಯಕ್ಕೆ ನೇಮಿಸಿದಂತೆ ವೀರೇಶ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ ಮಹೇಶ್ ಎಂಬವರೊಂದಿಗೆ ಹೋಗಿದ್ದು, ಹೈಟ್‌ ಗೇಜ್‌ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಕಂಬದ ಮೇಲೆ ಅಡ್ಡವಾಗಿ ಹಾಕುತ್ತಿದ್ದ ಕಬ್ಬಿಣದ ಪಟ್ಟಿ ಸರಿಯಾಗಿ ಕುಳಿತುಕೊಳ್ಳದಿದ್ದಾಗ ರೈಲ್ವೇ ಇಲಾಖೆಯ ಅಧಿಕಾರಿ ಎಸ್ ಎಸ್ ಈ ವೀರೇಶ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶರವರು ಪಿರ್ಯಾದಿದಾರರ ಗಂಡ ಆನಂದರವರಿಗೆ ಬಲವಂತವಾಗಿ ಹೆದರಿಸಿ 30 ಕೆ.ಜಿ. ತೂಕದ ಜಾಕನ್ನು ಕೈಗೆ ಕೊಟ್ಟು ಲ್ಯಾಡರ್ ಮೇಲೆ ಹತ್ತಿ ನೋಡುವಂತೆ ಮೇಲಕ್ಕೆ ಹತ್ತಲು ಬೇಕಾದ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದೆ, ನಿರ್ಲಕ್ಷವಾಗಿ ಹೈಟ್ ಗೇಜ್ ಹತ್ತುವಂತೆ ತಿಳಿಸಿದ್ದು, ಅವರ ಆದೇಶಿಸಿದಂತೆ ಪಿರ್ಯಾದಿದಾರರ ಗಂಡ ಆನಂದರವರು ಮೇಲಕ್ಕೆ ಹತ್ತಿ ಹೈಟ್‌ಗೇಜನ್ನು ಪರಿಶೀಲಿಸುತ್ತಿರುವಾಗ, ಇಲ್ಲವೇ ಹೈಟ್‌ಗೇಜ್‌ ಕಾಮಗಾರಿಗೆ ಬಳಸುವ ಉಪಕರಣ ಅವರ ತಲೆಗೆ ಹೊಡೆದು, ದಿನಾಂಕ 31/03/2025 ರಂದು ಮಧ್ಯಾಹ್ನ 1:55 ಗಂಟೆ ಮೇಲಿನಿಂದ ಕೆಳಗೆ ಬಿದ್ದು ತಲೆಗೆ ತೀವೃತರವಾದ ಪೆಟ್ಟಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದ ಪಿರ್ಯಾದಿದಾರರ ಗಂಡ ಆನಂದ ಚಿಕಿತ್ಸೆಯಲ್ಲಿರುತ್ತಾ ಫಲಕಾರಿಯಾಗದೇ ದಿನಾಂಕ 02/04/2025 ರಂದು ಮಧ್ಯಾಹ್ನ 2:55 ಗಂಟೆಗೆ ಮೃತಪಟ್ಟಿದ್ದು ಪಿರ್ಯಾದಿದಾರರ ಗಂಡ ಟ್ರ್ಯಾಕ್ ಮ್ಯಾನ್ ಕರ್ತವ್ಯ ಮಾಡಿಕೊಂಡಿದ್ದವರಿಗೆ ಹೈಟ್‌ ಗೇಜ್‌ ಕರ್ತವ್ಯಕ್ಕೆ ನೇಮಿಸಿ ಸುಮಾರು 30 ಕೆ.ಜಿ. ತೂಕದ ಜಾಕನ್ನು ಕೈಗೆ ಕೊಟ್ಟು ನಿರ್ಲಕ್ಷವಾಗಿ ಯಾವುದೇ ಸುರಕ್ಷಾ ಸಾಧನವನ್ನು ನೀಡದೆ ಹೈಟ್‌ಗೇಜ್ ಹತ್ತಿಸಿದ ಪರಿಣಾಮ ಮೇಲಿಂದ ಕೆಳಗೆ ಬಿದ್ದು ತೀವೃ ಗಾಯಗೊಂಡು ಮೃತಪಡಲು ಕಾರಣರಾದ ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿ, ಎಸ್.ಎಸ್.ಇ. ವೀರೇಶ್ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ ಮತ್ತು ಕಾಂಟ್ರಾಕ್ಟರ್‌ ರೋನಾಲ್ಡ್‌ ಸಿಕ್ವೇರಾ ಮತ್ತು ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2025 ಕಲಂ: 106, 3 (5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button