ಯುವಜನ

ಈಜಲು ಕಲಿಸಲು ಹೋಗಿ ತಂದೆ ಮಗಳು ದಾರುಣ ಸಾವು

Views: 140

ಕನ್ನಡ ಕರಾವಳಿ ಸುದ್ದಿ: ಮಗಳಿಗೆ ಈಜು ಕಲಿಸಲು ಹೋಗಿ ತಂದೆ ದಾರುಣವಾಗಿ ಬಲಿಯಾಗಿರೋ ಘಟನೆ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ನಾಗೇಶ್ (42) ಮಗಳು ಧನುಶ್ರೀ (12) ಮೃತ ದುರ್ದೈವಿಗಳು.

ತಂದೆ ನಾಗೇಶ್ ಮಗಳಿಗೆ ಈಜು ಕಲಿಸಲು ಹೋಗಿದ್ದ. ಇದೇ ವೇಳೆ ಕೆರೆಯಲ್ಲಿ ಹೂಳು ತುಂಬಿದ್ರಿಂದ ಹಳಿಯಲ್ಲಿ ಸಿಲುಕಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ ಧನುಶ್ರೀ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಳು.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ವಿಷಯ ತಿಳಿದ ಕೂಡಲೇ ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button
error: Content is protected !!