ಪ್ರವಾಸಕ್ಕೆ ಬಂದಿದ್ದ ವೈದ್ಯೆ ರೀಲ್ಸ್ ಮಾಡುತ್ತ ನದಿಗೆ ಬಿದ್ದು ಸಾವು

Views: 165
ಕನ್ನಡ ಕರಾವಳಿ ಸುದ್ದಿ: ಪ್ರವಾಸಕ್ಕೆ ಬಂದಿದ್ದ ಯುವತಿ ರೀಲ್ಸ್ ಮಾಡುತ್ತ ನದಿಗೆ ಜಿಗಿದಿರುವ ಹೈದರಾಬಾದ್ ಮೂಲದ ವೈದ್ಯೆ ಅನನ್ಯರಾವ್ ಗಾಗಿ ತೀವ್ರ ಹುಡುಕಾಟ ಕೊಪ್ಪಳದಲ್ಲಿ ನಡೆದಿದೆ.
ಇಂದು ಬೆಳಗ್ಗೆಯಿಂದ ರಕ್ಷಣಾ ಸಿಬ್ಬಂದಿ ತುಂಗಭದ್ರಾ ನದಿಯಲ್ಲಿ ಬೀಡುಬಿಟ್ಟಿದ್ದು, ವೈದ್ಯರ ಸುಳಿವಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ವೈದ್ಯೆ ಅನನ್ಯ ರಾವ್ ಯಾರು?
ಅನನ್ಯ ರಾವ್, ಮೂಲತಃ ಹೈದರಾಬಾದ್ ತಿರುಮಲಗಿರಿಯವರು. ಪೂರ್ಣ ಹೆಸರು ಅನನ್ಯ ಮೋಹನ್ ರಾವ್. ಇವರ ತಂದೆಯ ಹೆಸರು ಮನಮೋಹನ್. ತಾಯಿ ರಜನಿ. ಈ ರಜನಿ ದಂಪತಿಗೆ ಅನನ್ಯ ಮತ್ತು ಅಮಯ ಎಂಬ ಅವಳಿ ಮಕ್ಕಳಿದ್ದರು. ಅಮಯ ವಿದೇಶದಲ್ಲಿದ್ದರೆ, ಅನನ್ಯ ಹೆತ್ತವರ ಜೊತೆಯಿದ್ದರು. ಅನನ್ಯಾ ಅವರು ಹೈದರಾಬಾದ್ ವಿಕೆಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಅನನ್ಯ ತಂದೆ ಮನಮೋಹನ ಹಾಗೂ ಮೈನಮಪಲ್ಲಿ ಮಾಜಿ ಶಾಸಕ ಹನುಮಂತ ರಾವ್ ಮತ್ತು ಮೇದಕ್ ಶಾಸಕ ರೋಹಿತ್ ಸಂಬಂಧಿಗಳು. ಇದೇ ಕಾರಣಕ್ಕೆ ವಿಷಯ ತಿಳಿಯುತ್ತಿದ್ದಂತೆಯೇ ರೋಹಿತ್ ಹಾಗೂ ಹನುಮಂತರಾವ್ ಕೊಪ್ಪಳಕ್ಕೆ ಆಗಮಿಸಿ, ಶೋಧಕಾರ್ಯಕ್ಕೆ ಸಲಹೆಗಳನ್ನು ನೀಡುತ್ತಿದ್ದಾರೆ.
ಇಂದು ಬೆಳಗ್ಗೆಯಿಂದ ಮತ್ತೆ ಶೋಧಕಾರ್ಯ ಶುರುವಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಅನನ್ಯ ಇನ್ನು ಪತ್ತೆಯಾಗಿಲ್ಲ. ನೀರಿನ ಹರಿವು ಕಡಿಮೆ ಮಾಡುವಂತೆ ಕೊಪ್ಪಳ ಉಸ್ತುವಾರಿ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.