ಇತರೆ
ಮರವಂತೆ ಪಾಂಡುರಂಗ ಶ್ಯಾನುಭಾಗ್ ನಿಧನ

Views: 65
ಮರವಂತೆಯ ಹಿರಿಯ ದಿನಸಿ ವ್ಯಾಪಾರಿ, ಶ್ರೀ ಕೇಶವ ಬೊಬ್ಬರಿಯ ದೇವಸ್ಥಾನದ ಧರ್ಮದರ್ಶಿ ಮರವಂತೆ ಪಾಂಡುರಂಗ ಶ್ಯಾನುಭಾಗ್ (86) ಅಲ್ಪಕಾಲದ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಅಗಸ್ಟ್ 4ರಂದು ಭಾನುವಾರ ನಿಧನರಾದರು. ಅವರು ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಯಕ್ಷಗಾನದ ಪೋಷಕರಾಗಿದ್ದ ಅವರು ಹಲವು ವರ್ಷಗಳಿಂದ ಕರಾವಳಿಯ ಪ್ರಸಿದ್ಧ ಕಲಾವಿದರನ್ನು ಕರೆಸಿ ತಮ್ಮ ದೇವಸ್ಥಾನದಲ್ಲಿ ಏರ್ಪಡಿಸುತ್ತಿದ್ದ ಯಕ್ಷಗಾನ ತಾಳಮದ್ದಲೆ ಜನಮನ್ನಣೆ ಗಳಿಸಿತ್ತು.






