ಜನಮನ

26 ವರ್ಷಗಳ ಬಳಿಕ ಕಂದಹಾರ್‌ ವಿಮಾನ ಹೈಜಾಕ್‌ ಮಾಸ್ಟರ್‌ಮೈಂಡ್‌ ಅಜರ್ ಫಿನಿಶ್

Views: 122

ಕನ್ನಡ ಕರಾವಳಿ ಸುದ್ದಿ:‌ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. “ಆಪರೇಷನ್ ಸಿಂಧೂರ” ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ ಸಹೋದರ ಅಬ್ದುಲ್ ರೌಫ್ ಅಜರ್ ಹತನಾಗಿದ್ದಾನೆ.

ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯಾದ ಬಹಾವಲ್‌ಪುರ್‌ ಮೇಲೆ ನಡೆದ ದಾಳಿಯಲ್ಲಿ, ಮಸೂದ್‌ ಅಜರ್ ಕುಟುಂಬದ 14 ಸದಸ್ಯರು ಮೃತಪಟ್ಟಿದ್ದರು. ಈ ಪೈಕಿ ಮಸೂದ್‌ ಅಜರ್‌ ಸಹೋದರ್‌ ಅಬ್ದುಲ್‌ ರೌಫ್‌ ಕೂಡ ಒಬ್ಬ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಅಬ್ದುಲ್ ರೌಫ್ ಅಜರ್ 1999ರಲ್ಲಿ ನಡೆದಿದ್ದ ಇಂಡಿಯನ್ ಏರ್‌ಲೈನ್ಸ್ IC-814 ವಿಮಾನ ಅಪಹರಣ ಪ್ರಮುಖ ರೂವಾರಿ. ಕಂದಹಾರ್‌ ವಿಮಾನ ಅಪಹರಣ ಎಂದು ಸಾಮಾನ್ಯವಾಗಿ ಕರೆಯುವ ಈ ಘಟನೆಯಲ್ಲಿ, ಭಾರತೀಯ ಪ್ರಯಾಣಿಕರ ಸುರಕ್ಷಿತ ಬಿಡುಗಡೆಗೆ ಬದಲಾಗಿ, ಭಾರತದ ಜೈಲಿನಲ್ಲಿದ್ದ ಮೌಲಾನಾ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿಸಿಕೊಳ್ಳಲಾಗಿತ್ತು.

1994, ಡಿಸೆಂಬರ್‌ 24ರಂದು ನೇಪಾಳದ ಕಠ್ಮಂಡುವಿನಿಂದ 190 ಪ್ರಯಾಣಿಕರನ್ನು ಹೊತ್ತು ಭಾರತದ ರಾಜಧಾನಿ ಹೊಸದಿಲ್ಲಿಗೆ ಬರುತ್ತಿದ್ದ ಇಂಡಿಯನ್‌ ಏರ್‌ಲೈನ್ಸ್‌ ಏರ್‌ಬಸ್‌ IC-814ನ್ನು ಭಯೋತ್ಪಾದಕರು ಅಪಹರಿಸಿದ್ದರು. ಈ ವಿಮಾನವನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ಒಯ್ದಿದ್ದ ಭಯೋತ್ಪಾದಕರು, ಭಾರತೀಯ ಪ್ರಯಾಣಿಕ ಬಿಡುಗಡೆಗೆ ಪ್ರತಿಯಾಗಿ, ಭಾರತದ ಜೈಲಿನಲ್ಲಿದ್ದ ಮಸೂದ್‌ ಅಜರ್ ಸೇರಿದಂತೆ ಒಟ್ಟು ಮೂವರು ಕುಖ್ಯಾತ ಭಯೋತ್ಪಾದಕರ ಬಿಡುಗಡೆಯ ಷರತ್ತು ವಿಧಿಸಿದ್ದರು.

ಸುದೀರ್ಘ ಸಂಧಾನ ನಡೆದು, ಕೊನೆಗೆ ಡಿ.31ರಂದು ಭಯೋತ್ಪಾದಕರ ಬೇಡಿಕೆಯಂತೆ ಮೂವರೂ ಉಗ್ರರನ್ನು ಅವರಿಗೆ ಹಸ್ತಾಂತರಿಸಲಾಯಿತು. ಆ ನಂತರ ಉಗ್ರರು IC-814 ವಿಮಾನವನ್ನು ಬಿಡುಗಡೆ ಮಾಡಿದ್ದರು. ಅಂದು ಉಗ್ರರ ಜೊತೆಗೆ ನಡೆದ ಸಂಧಾನದ ಹೊಣೆ ಹೊತ್ತಿದ್ದವರ ಪೈಕಿ,ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಕೂಡ ಒಬ್ಬರು.

ಇದೀಗ ಸಾವನ್ನಪ್ಪಿರುವ ಮಸೂದ್‌ ಅಜರ್‌ ಕುಟುಂಬದವರ ಪೈಕಿ, ಆತನ ಸಹೋದರ ಮತ್ತು ಕಂದಹಾರ್‌ ವಿಮಾನ ಅಪಹರಣದ ರೂವಾರಿ ಅಬ್ದುಲ್‌ ರೌಫ್‌ ಅಜರ್‌ ಕೂಡ ಒಬ್ಬ ಎಂಬುದು ತಿಳಿದುಬಂದಿದೆ. ಈ ಮೂಲಕ ಭಾರತವು 26 ವರ್ಷಗಳ ಬಳಿಕ ಕಂದಹಾರ್‌ ವಿಮಾನ ಅಪಹರಣದ ಪ್ರತೀಕಾರ ತೀರಿಸಿಕೊಂಡಂತಾಗಿದೆ.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ದಾಳಿಯಲ್ಲಿ ಮೃತಪಟ್ಟ ಅಬ್ದುಲ್‌ ರೌಫ್‌ ಅಜರ್‌, ಪಠಾಣ್‌ಕೋಟ್ ಭಯಾನಕ ದಾಳಿ ಮತ್ತು 2001ರ ಸಂಸತ್ ಭವನದ ಮೇಲಿನ ದಾಳಿಯ ಯೋಜನೆಯನ್ನೂ ರೂಪಿಸಿದ್ದ. ಒಟ್ಟಿನಲ್ಲಿ ಭಾರತ ಒಬ್ಬ ಕುಖ್ಯಾತ ಭಯೋತ್ಪಾದಕನನ್ನು ಹೊಡೆದುರುಳಿಸಿದೆ

Related Articles

Back to top button